ಕಾಸರಗೋಡು: ಗಾಳಿ ಮಳೆಯ ಅಬ್ಬರಕ್ಕೆ ಎಲ್ಲೆಡೆ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ವಿದ್ಯುತ್ ಇಲಾಖಾ ನೌಕರರು ಬಿಡುವಿಲ್ಲದೆ ಸುಸ್ತಾಗಿದ್ದಾರೆ. ಹಗಲು ರಾತ್ರಿ ಎನ್ನದೆ ನೌಕರರು ದಿನವಿಡೀ ಜೀವ ಕೈಯಲ್ಲಿಟ್ಟು ದುಡಿಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಕಾಞ೦ ಗಾಡ್ನಲ್ಲಿ ವಿದ್ಯುತ್ ತಂತಿ ದುರಸ್ತಿ ಸಂದರ್ಭದಲ್ಲಿ ನೌಕರರೊಬ್ಬರು ಕಂಬದ ಮೇಲೆಯೇ ಅಸ್ವಸ್ಥಗೊಂಡ ಘಟನೆ ನಡೆದಿದೆ. ಸೊಂಟಕ್ಕೆ ಹಗ್ಗ ಕಟ್ಟಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಕಂಬದಿಂದ ಕೆಳಗೆ ಬೀಳದೆ ಅಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬಂದಿಗಳು ಕಂಬದಲ್ಲಿ ಅಸ್ವಸ್ಥರಾಗಿ ದ್ದ ನೌಕರನನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರು.
ಮಾವುಂಗಾಲ್ ನ ವಿದ್ಯುತ್ ಸೆಕ್ಷನ್ ಕಚೇರಿಯ ಮೋಹನ್ ದಾಸ್ (೩೭) ಅಸ್ವಸ್ಥಗೊಂಡವರು.
ಮಾವುಂಗಾಲ್ ಬಳಿ ಯ ಮೂಲಕಂಡದಲ್ಲಿ ಮರಬಿದ್ದು ತುಂಡಾದ ತಂತಿಯನ್ನು ದುರಸ್ತಿಪಡಿಸುತ್ತಿದ್ದಾಗ ಘಟನೆ ನಡೆದಿದೆ .
ಮೋಹನ್ ದಾಸ್ ಅಲ್ಲದೆ ಇಬ್ಬರು ಇತರ ನೌಕರರು , ಸಬ್ ಇಂಜಿನಿಯರ್ , ಮೇಲ್ವಿಚಾರಕ ಹಾಗೂ ಇಬ್ಬರು ಲೈನ್ ಮೇನ್ ಜೊತೆಗಿದ್ದರು.
ವಿದ್ಯುತ್ ಸಂಪರ್ಕ ವಿಚ್ಛೇಧಿಸಿ ದ ಬಳಿಕ ಕಂಬಕ್ಕೆ ಹತ್ತಿ ವಿದ್ಯುತ್ ತಂತಿ ಯನ್ನು ಎಳೆದು ಕಟ್ಟುತ್ತಿದ್ದಾಗ ಕಂಬದಲ್ಲೇ ಕುಸಿದರು. ಕೂಡಲೇ ಜೊತೆಗಿದ್ದವರು ಮೇಲಕ್ಕೆ ಹತ್ತಿ ಕೆಳಗಡೆ ಬಿಲದಂತೆ ನೋಡಿಕೊಂಡರು. ಸೊಂಟಕ್ಕೆ ಹಗ್ಗ ಕಟ್ಟಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಅನಾಹುತ ತಪ್ಪಿದೆ ಎನ್ನಬಹುದು .
ಮಳೆ – ಗಾಳಿಗೆ ಜಿಲ್ಲೆಯ ಹಲವೆಡೆ ತಂತಿ ಕಡಿತ , ಕಂಬ ತುಂಡಾದ ಹಾಗೂ ಇನ್ನಿತರ ರೀತಿಯ ವಿದ್ಯುತ್ ಸಮಸ್ಯೆ ಕಂಡು ಬರುತ್ತಿದ್ದು , ಇಲಾಖೆ ನೌಕರರು ಬಿಡುವಿಲ್ಲದ ಕೆಲಸ ಮಾಡಬೇಕಾಗಿ ಬರುತ್ತಿದೆ
ವಾಹನಗಳ ಸಂಚಾರವಿದ್ದರೂ ರಸ್ತೆಬದಿಯಲ್ಲಿ ಜೋಡಿ ಜಿಂಕೆಗಳು ನಾನಾ-ನೀನಾ ಎಂದು ಕುಸ್ತಿ ಮಾಡಿದ ಘಟನೆ ಮೈಸೂರು-ಉಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಂಡೀಪುರದ…
ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ದರಲ್ಲಿಯೂ ನಟಿ ಅನುಷ್ಕಾ ಶೆಟ್ಟಿ ಜೊತೆಗಂತೂ ಪ್ರಭಾಸ್ ಮದುವೆಯೇ ಆಗಬಿಟ್ಟಿದ್ದಾರೆ…
ಅನುಮಾನಾಸ್ಪದ ರೀತಿಯಲ್ಲಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಹಾಸ್ಟೆಲ್ನಲ್ಲಿ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ನಡೆದಿದೆ.
ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಕಳೆದ ಶುಕ್ರವಾರ ಪ್ರತಿಷ್ಠಿತ ಮಂತ್ರಿಮಾಲ್ ನನ್ನು ಬಂದ್ ಮಾಡಲಾಗಿತ್ತು, ಮಾಲ್ ನ ಬೀಗ ತೆರೆಯುವಂತೆ ಬಿಬಿಎಂಪಿಗೆ…
ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಮೊಟೊರೊಲ ಕಂಪನಿ ಇದೀಗ ನೂತನ ಫೋನ್ನೊಂದಿಗೆ ಬಂದಿದೆ.
ನಗರದಲ್ಲಿ ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು…