ಮಂಗಳೂರು: ನಗರದ ಪಡೀಲ್ ಜಂಕ್ಷನ್ ಬಳಿ ಚಲುವಮಣಿ ಜಿ(38) ಎಂಬವನನ್ನು ಆತನ ಹತ್ತಿರ ಸಂಬಂಧಿ ಪ್ಯಾಟ್ರಿಕ್ ಸುರೇಶ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಶನಿವಾರ ನಡುರಾತ್ರಿ 2ಕ್ಕೆ ನಡೆದಿದೆ. ಕೊಲೆಯಾದ ಚಲುವಮಣಿ ಹಾಗೂ ಆರೋಪಿ ಪ್ಯಾಟ್ರಿಕ್ ಸುರೇಶ್ ಇಬ್ಬರು ಲಾರಿ ಚಾಲಕರು.
ಚಲುವಮಣಿ ಈತ ಚಿತ್ತೂರಿನಿಂದ ಗ್ರೇನೆಟ್ಸ್ ಲೋಡ್ ಮಾಡಿಕೊಂಡು ಮಂಗಳೂರಿನ ಪಡೀಲ್ ನ ಐಡಿಯಲ್ ನ ಟ್ರಾನ್ಸ್ ಪೊರ್ಟ್ ಗೆ ಬಂದಿದ್ದಾನೆ. ಹಾಗೆಯೇ ಪ್ಯಾಟ್ರಿಕ್ ಸುರೇಶ ಚಿತ್ತೂರಿನಿಂದ ಶಿವಮೊಗ್ಗ ಮುಖಾಂತರ ಮಂಗಳೂರಿನ ಐಡಿಯಲ್ ನ ಟ್ರಾನ್ಸ್ ಪೋರ್ಟ್ ಗೆ ಬಂದಿದ್ದಾನೆ.
ನಂತರ ಇಬ್ಬರೂ ರಾತ್ರಿ ಮದ್ಯ ಸೇವನೆ ಮಾಡಿ ಗಲಾಟೆ ಶುರು ಮಾಡಿದ್ದಾರೆ. ಈ ವೇಳೆ ಪ್ಯಾಟ್ರಿಕ್ ಸುರೇಶ ತನ್ನ ಬಳಿ ಇದ್ದ ಚೂರಿನಿಂದ ಚಲುವಮಣೆಯ ಹೊಟ್ಟೆಗೆ ಇರಿದಿದ್ದಾನೆ. ಆರೋಪಿ ಪ್ಯಾಟ್ರಿಕ್ ಸುರೇಶ್ ನನ್ನು ಕಂಕನಾಡಿ ನಗರ ಠಾಣೆಗೆ ವಶಕ್ಕೆ ಪಡೆದಿದ್ದಾರೆ.