ಮಂಗಳೂರು: ಮೂಳುರು ಇರಾ ಸಮೀಪ ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆಯು ಗುರುವಾರ ಸಂಜೆ ವೇಳೆ ನಡೆದಿದೆ.
ಮೃತ ಬೈಕ್ ಸವಾರನನ್ನು ಸಿನಾನ್(18) ಎಂದು ಗುರುತಿಸಲಾಗಿದೆ. ಸಹಸವಾರ್ ಜಹೀರ್ ಎಂಬಾತ ಗಾಯಗೊಂಡಿದ್ದಾರೆ. ಅವನನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಸಿನಾನ್ ಮಂಚಿ ಕಯ್ಯೂರು ನಿವಾಸಿಯಾಗಿದ್ದು, ಮಂಚಿ ಕೊಳ್ನಾಡಿನ ಎಸ್ ಎಸ್ ಎಫ್ ನ ಸಕ್ರಿಯ ಕಾರ್ಯಕರ್ತ ಎಂದು ತಿಳಿದುಬಂದಿದೆ.