News Karnataka Kannada
Monday, May 20 2024
ಕರಾವಳಿ

ಬಜೆಟ್ ನಲ್ಲಿ ಕರಾವಳಿಗೆ ಶೂನ್ಯ ಕೊಡುಗೆ: ಶಾಸಕರಿಂದ ಅಸಮಾಧಾನ

Photo Credit :

ಬಜೆಟ್ ನಲ್ಲಿ ಕರಾವಳಿಗೆ ಶೂನ್ಯ ಕೊಡುಗೆ: ಶಾಸಕರಿಂದ ಅಸಮಾಧಾನ

ಮಂಗಳೂರು: ಬಜೆಟ್ ನಲ್ಲಿ ಕರಾವಳಿಗೆ ಶೂನ್ಯ ಕೊಡುಗೆ ನೀಡಿದ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಚೊಚ್ಚಲ ಬಜೆಟ್ ವಿರುದ್ಧ ಕರಾವಳಿ ಶಾಸಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಇಂದು ಮಂಡನೆಯಾದ ಬಜೆಟ್ ನಲ್ಲಿ ಕರಾವಳಿ ಬಗ್ಗೆ ಯಾವುದೇ ವಿಚಾರಗಳು ಪ್ರಸ್ತಾಪವಾಗದಿರುವುದು ಶಾಸಕರ ಅಕ್ರೋಶಕ್ಕೆ ಕಾರಣವಾಗಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಸಮಾಧಾನ ವ್ಯಕ್ತಪಡಿಸಿ, ಸಂಕಷ್ಟದಲ್ಲಿರು ಎಂಡೋ ಸಂತ್ರಸ್ಥರ ಬಗ್ಗೆ ಕುಮಾರಸ್ವಾಮಿ ಅವರು ಅನುದಾನವನ್ನು ನೀಡುತ್ತಾರೆಂಬ ಭರವಸೆ ಸಂತ್ರಸ್ಥರಲ್ಲಿತ್ತು. ಆದರೆ ನಿರ್ಲಕ್ಷವನ್ನು ತೋರಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕುಮಾರಸದ್ವಾಮಿ ಎದುರಿಸಲಿದ್ದಾರೆ ಎಂದರು.

ಮರಳು ನೀತಿಯನ್ನು ಜಾರಿ ಮಾಡುವಲ್ಲಿ ವಿಫಲರಾಗಿದ್ದಾರೆ. ಪ್ರಸ್ತಾವನೆ ಆಗಿಲ್ಲ. ಕುಮ್ಕಿ ಹಕ್ಕು ಭಾಗ್ಯವನ್ನೂ ನೀಡುವಲ್ಲೂ ನಿರಾಸಕ್ತಿ ತೋರಿಸುವುದರ ಮೂಲಕ ಈ ಬಾರಿಯ ಬಜೆಟ್ ಕೇವಲ 5 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಕರಾವಳಿಗೆ ಯಾವುದೇ ಕೊಡುಗೆಯನ್ನು ನೀಡಿದ ನಿರಾಸೆಯನ್ನು ಮೂಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು