ಮಂಗಳೂರು: ಬಜೆಟ್ ನಲ್ಲಿ ಕರಾವಳಿಗೆ ಶೂನ್ಯ ಕೊಡುಗೆ ನೀಡಿದ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಚೊಚ್ಚಲ ಬಜೆಟ್ ವಿರುದ್ಧ ಕರಾವಳಿ ಶಾಸಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇಂದು ಮಂಡನೆಯಾದ ಬಜೆಟ್ ನಲ್ಲಿ ಕರಾವಳಿ ಬಗ್ಗೆ ಯಾವುದೇ ವಿಚಾರಗಳು ಪ್ರಸ್ತಾಪವಾಗದಿರುವುದು ಶಾಸಕರ ಅಕ್ರೋಶಕ್ಕೆ ಕಾರಣವಾಗಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಸಮಾಧಾನ ವ್ಯಕ್ತಪಡಿಸಿ, ಸಂಕಷ್ಟದಲ್ಲಿರು ಎಂಡೋ ಸಂತ್ರಸ್ಥರ ಬಗ್ಗೆ ಕುಮಾರಸ್ವಾಮಿ ಅವರು ಅನುದಾನವನ್ನು ನೀಡುತ್ತಾರೆಂಬ ಭರವಸೆ ಸಂತ್ರಸ್ಥರಲ್ಲಿತ್ತು. ಆದರೆ ನಿರ್ಲಕ್ಷವನ್ನು ತೋರಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಕುಮಾರಸದ್ವಾಮಿ ಎದುರಿಸಲಿದ್ದಾರೆ ಎಂದರು.
ಮರಳು ನೀತಿಯನ್ನು ಜಾರಿ ಮಾಡುವಲ್ಲಿ ವಿಫಲರಾಗಿದ್ದಾರೆ. ಪ್ರಸ್ತಾವನೆ ಆಗಿಲ್ಲ. ಕುಮ್ಕಿ ಹಕ್ಕು ಭಾಗ್ಯವನ್ನೂ ನೀಡುವಲ್ಲೂ ನಿರಾಸಕ್ತಿ ತೋರಿಸುವುದರ ಮೂಲಕ ಈ ಬಾರಿಯ ಬಜೆಟ್ ಕೇವಲ 5 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಕರಾವಳಿಗೆ ಯಾವುದೇ ಕೊಡುಗೆಯನ್ನು ನೀಡಿದ ನಿರಾಸೆಯನ್ನು ಮೂಡಿಸಿದ್ದಾರೆ.