ಮೂಡುಬಿದಿರೆ: ಕೊಡ್ಯಡ್ಕ ದೇವಸ್ಥಾನದ ಆವರಣದಲ್ಲಿ ಸಿಟ್ಟಿಗೊಳಗಾಗಿದ್ದ ಆನೆಯಿಂದ ತಪ್ಪಿಸಿಕೊಂಡು ಓಡುವಾಗ ಕಲ್ಲು ಹಾಸಿದ ನೆಲಕ್ಕೆ ಜಾರಿ ಬಿದ್ದು, ಕಾರ್ಮಿಕ ಮೃತಪಟ್ಟಿದ್ದಾರೆ.
ಕಾರ್ಕಳ ಕೈಗಾರಿಕಾ ಪ್ರದೇಶದ ವಿಶ್ವನಾಥ ದೇವಾಡಿಗ (58) ಮೃತರು. ಇವರು ದೇವಸ್ಥಾನದ ಕಾರ್ಮಿಕರಾಗಿ ದುಡಿಯುತ್ತಿದ್ದರು.
ಮಾವುತ ಆಹಾರ ತರಲು ಹೊರ ಹೋದ ವೇಳೆ ಇವರು ಆನೆಗೆ ಆಹಾರ ನೀಡುವಾಗ ಸತಾಯಿಸಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಾದ ಆನೆ ಒಮ್ಮೆಲೆ ಸೊಂಡಿಲು ಎತ್ತಿ ಮುಂದಕ್ಕೆ ಬರಲು ಯತ್ನಿಸಿದೆ. ಹೆದರಿ ಓಡುವಾಗ ಜಾರಿ ನೆಲಕ್ಕೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮ್ರತಪಟ್ಟಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.