ಪುತ್ತೂರು : ಪುತ್ತೂರು ಕೆಎಸ್ಆ ರ್ ಟಿಸಿ ವಿಭಾಗೀಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಗವಿಕಲೆ ಸಿಬ್ಬಂದಿಯೊಬ್ಬರಿಗೆ ವಿಭಾಗೀಯ ಅಧಿಕಾರಿ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿರುವ ಕುರಿತು ಪುತ್ತೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಕ್ರಂಪಾಡಿಯಲ್ಲಿರುವ ಕೆಎಸ್ಆಿರ್ ಟಿಸಿ ವಿಭಾಗೀಯ ಘಟಕದ ಉಗ್ರಾಣ ಶಾಖೆಯ ಸಿಬ್ಬಂದಿ, ಅಂಗವಿಕಲೆಯಾಗಿರುವ ಮುಂಡೂರು ಗ್ರಾಮದ ಹಿಂದಾರು ನಿವಾಸಿ ಶಾಲಿನಿ ದೌರ್ಜನ್ಯಕ್ಕೊಳಗಾದವರು. ಆಕೆಯ ಮೇಲೆ ಕೆಎಸ್ಆುರ್ ಟಿಸಿ ವಿಭಾಗೀಯ ಅಧಿಕಾರಿ ನಾಗರಾಜ್ ಶಿರಾಲಿ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.
ಶಾಲಿನಿ ಅವರು 6 ತಿಂಗಳ ರಜೆ ಹಾಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಸಂಸ್ಥೆಯ ವಿಚಾರಣೆಗಾಗಿ ವಿಭಾಗೀಯ ಕಚೇರಿಗೆ ತೆರಳಿದ್ದ ವೇಳೆ ಆರೋಪಿ ವಿಭಾಗಾಧಿಕಾರಿ `ತನ್ನ ವಿರುದ್ಧ ಕೇಂದ್ರ ಕಚೇರಿಗೆ ದೂರು ನೀಡಿರುವುದನ್ನು ವಾಪಾಸು ಪಡೆಯಬೇಕು’ ಎಂದು ಹೇಳಿ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.
ಹಲ್ಲೆ ನಡೆಸಿದ ವೇಳೆ ನೆಲಕ್ಕೆ ಬಿದ್ದು ಮುಖದ ಮತ್ತು ತಲೆಯ ಭಾಗಕ್ಕೆ ಗಾಯಗೊಂಡಿದ್ದ ಬಸ್ ನಿರ್ವಾಹಕಿ ಶಾಲಿನಿ ಅವರು ಫೆ.15ರಂದು ಇಲ್ಲಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಘಟನೆಯ ಕುರಿತು ಅವರು ಪುತ್ತೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಸೆಕ್ಷನ್ 354 ಮತ್ತು ದೂಡಿ ಹಾಕಿದ ಸೆಕ್ಷನ್ನಂಕತೆ ಪ್ರಕರಣ ದಾಖಿಸಲಾಗಿದೆ.