ಕಾಸ್ಸಿಯಾ ಪ್ರೌಢ ಶಾಲೆಯ ಸಂಸ್ಥಾಪಕರ ದಿನಾಚರಣೆ ಹಾಗೂ ಅಮೃತ ಮಹೋತ್ಸವ ವರ್ಷದ ಉದ್ಘಾಟನೆಯು ಇಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾ. ಆಂಟೋನಿ ಶೆರಾರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜಲಕ್ಷ್ಮಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಂಗಳೂರು ದಕ್ಷಿಣ ವಲಯ, ಸ್ವಾಮಿ ರಘುರಾಮನಂದಾಜೀ ರಾಮಕೃಷ್ಣ ಮಠ, ಮಂಗಳೂರು, ಶಾಲಾ ಸಂಚಾಲಕರಾದ ವಂದನೀಯ ಫಾ. ಎರಿಕ್ ಕ್ರಾಸ್ತಾ, ಶಾಲಾ ಮುಖ್ಯ ಗುರುಗಳು ಶ್ರೀ ಎವರಿಸ್ಟ್ ಕ್ರಾಸ್ತಾ, ಶ್ರೀಮತಿ ಜೇನ್ ಪಿಂಟೊ ಉಪಾಧ್ಯಕ್ಷರು, ಕಾಸ್ಸಿಯಾ ಚರ್ಚ್ ಪಾಲನಾ ಸಮಿತಿ ವಿಜಯಲಕ್ಷ್ಮಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಹಾಗೂ ಸುಭಾಷ್, ಅಧ್ಯಕ್ಷರು ಹಳೆ ವಿದ್ಯಾರ್ಥಿ ಇವರು ಸಂಘ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಶಾಲಾ ಸಂಚಾಲಕಾರದ ಫಾ. ಎರಿಕ್ ಕ್ರಾಸ್ತಾರವರು ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿ ರೀಟಾ ಪಿಂಟೊರವರು ಶಾಲಾ ಸಂಸ್ಥಾಪಕ ವಂದನೀಯ ಮೊನ್ಞಿಂಜೊರ್ ಎಫ್. ಎಕ್ಸ್. ಫೆರ್ನಾಂಡಿಸ್ ಅವರ ಜೀವನ ಚರಿತ್ರೆಯ ಪರಿಚಯ ಮಾಡುವುದರೊಂದಿಗೆ ಸ್ಮರಣೆ ಮಾಡಿದರು. ಅತಿಥಿಗಳಿಂದ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಅಮೃತ ಮಹೋತ್ಸವ ಸಮಿತಿಯ ಅನುಷ್ಠಾಪನೆಯನ್ನು ಶಾಲಾ ಮುಖ್ಯ ಗುರುಗಳಾದ ಎವರಿಸ್ಟ್ ಕ್ರಾಸ್ತಾರವರು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಸಭಾಧ್ಯಕ್ಷ ಫಾ. ಆಂಟೋನಿ ಶೆರಾ ಹಾಗೂ ಅತಿಥಿಗಳು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ದೇಶ-ವಿದೇಶಗಳಲ್ಲಿ ವಾಸಿಸುತ್ತಿರುವ ಹಳೆ ವಿದ್ಯಾರ್ಥಿಗಳಿಗೆ ಅಮೃತ ಮಹೋತ್ಸವ ಆಚರಣೆಯ ಮಾಹಿತಿಗಳನ್ನು ತಲುಪಿಸಲು ಫೇಸ್ಬುಕ್ ಖಾತೆಯನ್ನು ಅಧ್ಯಕ್ಷರಿಂದ ತೆರೆಯಲಾಯಿತು.
ಸ್ವಾಮಿ ರಘುರಾಮನಂದಾಜೀ ಮತ್ತು ಶ್ರೀಮತಿ ರಾಜಲಕ್ಷ್ಮಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಮೃತ ಮಹೋತ್ಸವದ ಲಾಂಛನ ಬಿಡುಗಡೆಗೊಳಿಸಿದರು. ಸ್ವಾಮೀಜಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಮಾನಸಿಕ ಶಕ್ತಿಯನ್ನು ಗಟ್ಟಿಗೊಳಿಸುವ ಶಿಕ್ಷಣದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ರಾಜಲಕ್ಷ್ಮಿಯವರು ಸ್ಥಾಪಕರ ಸಾಧನೆಯನ್ನು ಪ್ರಶಂಸಿಸಿ ಅಮೃತ ಮಹೋತ್ಸವಕ್ಕೆ ಶುಭ ಕೋರಿದರು.
ಅಧ್ಯಕ್ಷ ಫಾ. ಆಂಟೋನಿ ಶೆರಾ ಅವರು ಶಿಕ್ಷಕರು ಶಾಲೆಗಳಲ್ಲಿ ಕಲಿಸುವ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಲು ಹಿರಿಯರು, ಪೋಷಕರು ಮಾರ್ಗದರ್ಶಕರಾಗಬೇಕೆಂದು ಕರೆ ನೀಡಿದರು.
ದೈಹಿಕ ಶಿಕ್ಷಕ ಶ್ರೀ ಅರುಣ್ ಪ್ರಸಾದ್ ರೈರವರು ವಂದನಾರ್ಪಣೆಗೈದು ಶ್ರೀಮತಿ ಸುನಿತಾ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.