ಮಂಗಳೂರು: ಎಟಿಎಂ ಒಳಗಡೆ ಸೆಕ್ಯುರಿಟಿ ಗಾರ್ಡ್ ಸಾವನ್ನಪ್ಪಿರುವ ಘಟನೆ ಕುದ್ರೋಳಿಯ ಬಳಕೆ ಬಳಿ ಇರುವ ವಿಜಯಬ್ಯಾಂಕ್ ಎಟಿಎಂನಲ್ಲಿ ನಡೆದಿದೆ.
ಮೃತಪಟ್ಟವರು ನಾರಾಯಣ ಶೆಟ್ಟಿ(58) ಎಂದು ಗುರುತಿಸಲಾಗಿದೆ. ವಿಜಯ ಬ್ಯಾಂಕ್ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂದರ್ಭ ಹೃದಯಘಾತದಿಂದ ಸಾವನ್ನಪಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.