ಉಡುಪಿ: ಇತ್ತಂಡಗಳ ನಡುವೆ ನಡೆದ ಜಗಳದಲ್ಲಿ ಓರ್ವ ಯುವಕ ಚೂರಿ ಇರಿತಕ್ಕೊಳಗಾದ ಘಟನೆ ಉಡುಪಿಯ ದೊಡ್ಡಣಗುಡ್ಡೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಶರತ್ ಚೂರಿ ಇರಿತಕ್ಕೊಳಗಾದ ಯುವಕ. ನಿನ್ನೆ ಸಂಜೆ ಮಲ್ಪೆಯಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ನಡೆದ ಸುಡುಮದ್ದು ಪ್ರದರ್ಶನ ಹಾಗೂ ಆರ್ಕೆಸ್ಟ್ರಾ ಕಾರ್ಯಕ್ರಮದ ವೇದಿಕೆ ಹಿಂಭಾಗದಲ್ಲಿ ಎರಡು ನೃತ್ಯ ತಂಡಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿ ಹೊಡೆದಾಟ ಬೇಡ ಎಂದು ಆಯೋಜಕರು ಎರಡೂ ತಂಡಗಳನ್ನು ಅಲ್ಲಿಂದ ಕಳುಹಿಸಿದ್ದಾರೆ.
ಬಳಿಕ ಶರತ್ ಅನ್ನು ಹಿಂಬಾಲಿಸಿಕೊಂಡು ಹೊಡೆದಾಟಕ್ಕೆ ಬಂದ ಆರೋಪಿಗಳಲ್ಲಿ ಓರ್ವ ಕೋಳಿ ಅಂಕದಲ್ಲಿ ಬಳಸುವ ಬಾಲ್ ನಿಂದ ಇರಿದು ತಂಡದೊಂದಿಗೆ ಪರಾರಿಯಾಗಿದ್ದಾನೆ. ಚೂರಿ ಇರಿತಕ್ಕೊಳಗಾದ ಶರತ್ ನನ್ನು ಕ್ರೇಜಿ ತಂಡದ ಸದಸ್ಯರು ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳಾದ ದೀಪಕ್ , ಸುನಿಲ್, ರಕ್ಷಿತ್, ಶರತ್, ಚರಣ್ ಸೇರಿ 7 ಮಂದಿ ಮೇಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.