News Karnataka Kannada
Thursday, May 02 2024
ಕರಾವಳಿ

ಇತ್ತಂಡಗಳ ಮಧ್ಯೆ ಜಗಳ: ಓರ್ವನಿಗೆ ಚೂರಿ ಇರಿತ

Photo Credit :

ಇತ್ತಂಡಗಳ ಮಧ್ಯೆ ಜಗಳ: ಓರ್ವನಿಗೆ ಚೂರಿ ಇರಿತ

ಉಡುಪಿ: ಇತ್ತಂಡಗಳ ನಡುವೆ ನಡೆದ ಜಗಳದಲ್ಲಿ ಓರ್ವ ಯುವಕ ಚೂರಿ ಇರಿತಕ್ಕೊಳಗಾದ ಘಟನೆ ಉಡುಪಿಯ ದೊಡ್ಡಣಗುಡ್ಡೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಶರತ್ ಚೂರಿ‌‌ ಇರಿತಕ್ಕೊಳಗಾದ ಯುವಕ.‌ ನಿನ್ನೆ ಸಂಜೆ ಮಲ್ಪೆಯಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ನಡೆದ ಸುಡುಮದ್ದು ಪ್ರದರ್ಶನ ಹಾಗೂ ಆರ್ಕೆಸ್ಟ್ರಾ ಕಾರ್ಯಕ್ರಮದ ವೇದಿಕೆ‌ ಹಿಂಭಾಗದಲ್ಲಿ ಎರಡು ನೃತ್ಯ ತಂಡಗಳ ಸದಸ್ಯರ ನಡುವೆ ಮಾತಿನ‌ ಚಕಮಕಿ‌ ನಡೆದಿದೆ. ಸ್ಥಳದಲ್ಲಿ ಹೊಡೆದಾಟ‌‌ ಬೇಡ ಎಂದು ಆಯೋಜಕರು ಎರಡೂ ತಂಡಗಳನ್ನು ಅಲ್ಲಿಂದ ಕಳುಹಿಸಿದ್ದಾರೆ.

ಬಳಿಕ ಶರತ್ ಅನ್ನು ಹಿಂಬಾಲಿಸಿಕೊಂಡು ಹೊಡೆದಾಟಕ್ಕೆ ಬಂದ ಆರೋಪಿಗಳಲ್ಲಿ‌ ಓರ್ವ ಕೋಳಿ‌ ಅಂಕದಲ್ಲಿ ಬಳಸುವ ಬಾಲ್ ನಿಂದ ಇರಿದು ತಂಡದೊಂದಿಗೆ ಪರಾರಿಯಾಗಿದ್ದಾನೆ. ಚೂರಿ ಇರಿತಕ್ಕೊಳಗಾದ ಶರತ್ ನನ್ನು‌ ಕ್ರೇಜಿ ತಂಡ‌ದ ಸದಸ್ಯರು ಕೆಎಂಸಿ‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳಾದ‌ ದೀಪಕ್ , ಸುನಿಲ್, ರಕ್ಷಿತ್, ಶರತ್, ಚರಣ್ ಸೇರಿ 7 ಮಂದಿ‌ ಮೇಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
192
Shreyas Vittal

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು