ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ವಿವಾಹ ನಿಶ್ಚಿತಾರ್ಥವಾಗಿದ್ದ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಂದಿರುವ ಘಟನೆ ನಡೆದಿದೆ.
ಕೊಲೆಯಾದ 35 ವರ್ಷದ ಯುವತಿಯನ್ನು ಮುದ್ನಾಳ್ ತಾಂಡಾ ನಿವಾಸಿ ಸುಶ್ಮಿತಾ (ಹೆಸರು ಬದಲಾಯಿಸಲಾಗಿದೆ) ಗೆ ಕೆಲದಿನಗಳ ಹಿಂದಷ್ಟೇ ಆಕೆಗೆ ನಿಶ್ಚಿತಾರ್ಥವಾಗಿದ್ದು, ಶೀಘ್ರದಲ್ಲಿಯೇ ಮದುವೆ ನಡೆಯುವುದರಲ್ಲಿತ್ತು. ಸಂತ್ರಸ್ತೆ ಸವಿತಾ ವಿಶೇಷಚೇತನ ಯುವತಿಯಾಗಿದ್ದು, ಆಕೆ ಅಣ್ಣನೊಂದಿಗೆ ವಾಸಿಸುತ್ತಿದ್ದಳು. ಸೆ. 9ರಂದು ಯುವತಿ ಕಂಚಗಾರಹಳ್ಳಿ ಕ್ರಾಸ್ನಲ್ಲಿರುವ ತನ್ನ ಜಮೀನಿಗೆ ಸಂತ್ರಸ್ತೆ ಹೋಗಿದ್ದ ವೇಳೆ ಘಟನೆ ನಡೆದಿದೆ.
ಸವಿತಾಳ ಎದೆ ಮತ್ತು ಕಿವಿಯ ಮೇಲೆ ಇರಿತದ ಗಾಯಗಳಾಗಿದ್ದು, ಗ್ರಾಮಸ್ಥರು ಆಕೆಯನ್ನು ತಕ್ಷಣ ಕಲಬುರಗಿಯ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಸೋಮವಾರ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪೊಲೀಸರು ಒರ್ವ ಶಂಕಿತ ವ್ಯಕ್ತಿ ಸಚಿನ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಇದು ಸಾಮೂಹಿಕ ಅತ್ಯಾಚಾರ ಪ್ರಕರಣವೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.