ಯಾದಗಿರಿ: ಜಿಲ್ಲೆಯ ಹುಣಸಗಿ ಪಟ್ಟಣದ ಕಕ್ಕೇರಾ ಕ್ರಾಸ್ ಬಳಿ ಭಾನುವಾರ ರಾತ್ರಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕೋಟೆಗುಡ್ಡ ಗ್ರಾಮದ ಕುರಿಗಾಹಿಗಳಾದ ಬಾಲಪ್ಪ (55) ಮತ್ತು ಜಟ್ಟಪ್ಪ (60) ಮೃತಪಟ್ಟವರು. ಕೊಡೇಕಲ್ ಗ್ರಾಮದ ತರಕಾರಿ ವ್ಯಾಪಾರಿ ಪರಸಪ್ಪ (45) ಮೃತ ದುರ್ದೈವಿ.
ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.