News Karnataka Kannada
Monday, April 29 2024
ಯಾದಗಿರಿ

ಪಲ್ಲಕ್ಕಿ ಮೆರವಣಿಗೆ ವೇಳೆ 2 ಗ್ರಾಮಗಳ ಜನರ ಮಧ್ಯೆ ಮಾರಾಮಾರಿ

ತಾಲೂಕಿನ ಮೈಲಾಪುರದಲ್ಲಿ ಮೈಲಾರಲಿಂಗೇಶ್ವರ ಜಾತ್ರೆ ಪಲ್ಲಕ್ಕಿ ಮೆರವಣಿಗೆ ವೇಳೆ 2 ಗ್ರಾಮಗಳ ಜನರ ಮಧ್ಯೆ ಮಾರಾಮಾರಿ ಉಂಟಾಗಿದೆ.
Photo Credit : News Kannada

ಯಾದಗಿರಿ: ಯಾದಗಿರಿ ತಾಲೂಕಿನ ಮೈಲಾಪುರದಲ್ಲಿ ಮೈಲಾರಲಿಂಗೇಶ್ವರ ಜಾತ್ರೆಯ ಪಲ್ಲಕ್ಕಿ ಮೆರವಣಿಗೆ ವೇಳೆ 2 ಗ್ರಾಮಗಳ ಜನರ ಮಧ್ಯೆ ಹೊಡೆದಾಟ ಉಂಟಾಗಿದೆ.

ಅರಕೇರ(ಕೆ) ಹಾಗೂ ರಾಮಸಮುದ್ರ ಗ್ರಾಮದ ಭಕ್ತರ ನಡುವೆ ಬಡಿದಾಟವಾಗಿದೆ.

ಹೊನ್ನಕೆರೆಗೆ ಗಂಗಾ ಸ್ನಾನಕ್ಕೆ ಮೈಲಾರಲಿಂಗೇಶ್ವರ ಪಲ್ಲಕ್ಕಿ ಹೋಗುತ್ತಿತ್ತು. ರಾಮಸಮುದ್ರ ಗ್ರಾಮದ ಕಡೆ ತೆಗೆದುಕೊಂಡು ಹೋಗಲು ಭಕ್ತರು ಯತ್ನಿಸಿದ್ದಾರೆ. ಇನ್ನೊಂದು ಕಡೆ ಪಲ್ಲಕ್ಕಿಯನ್ನು ಅರಕೇರ ಗ್ರಾಮದ ಕಡೆ ಭಕ್ತರು ಎಳೆದಾಡಿದ್ದಾರೆ. ಈ ವೇಳೆ ಎರಡು ಗ್ರಾಮಗಳ ಭಕ್ತರಿಂದ ದೊಣ್ಣೆಗಳಿಂದ ಬಡಿದಾಟವಾಗಿದೆ. ಕೊನೆಗೆ ಕೆರೆ ಕಡೆ ಮೈಲಾಪುರದ ಮೈಲಾರಲಿಂಗೇಶ್ವರನ ಪಲ್ಲಕ್ಕಿ ತೆರಳಿದೆ.

ರಾಮಸಮುದ್ರ ಕಡೆ ಹೋಗಬೇಕು ಅಂತ ರಾಮಸಮುದ್ರ ಗ್ರಾಮಸ್ಥರ ವಾದವಾಗಿದ್ದರೆ, ಇನ್ನೊಂದು ಕಡೆ ಅರಕೇರ ಕಡೆ ಹೋಗಬೇಕು ಅಂತ ಅರಕೇರ ಗ್ರಾಮಸ್ಥರು ಒತ್ತಾಯವಾಗಿತ್ತು. ಇದೆ ಕಾರಣಕ್ಕೆ ಎರಡು ಗ್ರಾಮದ ಭಕ್ತರು ಕೈಯಲ್ಲಿ ದೊಣ್ಣೆಗಳನ್ನ ಹಿಡಿದುಕೊಂಡು ಹೊಡೆದಾಡಿದ್ದಾರೆ.

ಎರಡು ಗ್ರಾಮದ ಭಕ್ತರನ್ನ ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕಂಡು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು