ಯಾದಗಿರಿ: ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದ ಹೊರವಲಯದ ವಿಜಯಪುರ ಟು ಹೈದ್ರಾಬಾದ್ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಟೈರ್ ಬ್ಲಾಸ್ಟ್ ಆಗಿ ಸರಣಿ ಅಪಘಾತ ಸಂಭವಿಸಿದ ಘಟನೆ ನಡೆದಿದೆ.
ಸಾರಿಗೆ ಬಸ್ ಟೈರ್ ಬ್ಲಾಸ್ಟ್ ಆಗುತ್ತಿದ್ದಂತೆ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಕೆಎಸ್ಆರ್ಟಿಸಿ ಬಸ್ ನಿಯಂತ್ರಣಕ್ಕೆ ಬಾರದೇ ರಸ್ತೆ ಬದಿಯ ಹಣ್ಣಿನ ಅಂಗಡಿ ಹಾಗೂ ಮರಕ್ಕೆ ಡಿಕ್ಕಿ ಹೊಡೆದಿದೆ.
ಇದೇ ವೇಳೆ ರಸ್ತೆಯಲ್ಲಿ ವೇಗವಾಗಿ ಬರ್ತಿದ್ದ ಟ್ಯಾಂಕರ್ ವಾಹನ ಕೂಡ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಬೃಹತ್ ಮರವೊಂದು ಬೇರು ಸಮೇತ ಟ್ಯಾಂಕರ್ ವಾಹನದ ಮೇಲೆ ಬಿದ್ದಿದೆ.
ಸಾರಿಗೆ ಬಸ್, ಟ್ಯಾಂಕರ್ ಅಪಘಾತದ ಮಧ್ಯೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಎರಡು ಬೈಕ್ಗಳು ಕೂಡ ನಜ್ಜುಗುಜ್ಜಾಗಿದೆ.
ಹೈದ್ರಾಬಾದ್ನ ನಾರಾಯಣಪೇಟೆಯಿಂದ ಸೈದಾಪುರ ಕಡೆಗೆ ಸಾರಿಗೆ ಬಸ್ ಬರುತ್ತಾ ಇತ್ತು. ಟ್ಯಾಂಕರ್ ವಾಹನ ರಾಯಚೂರಿನ ಶಕ್ತಿನಗರದಿಂದ ಹಾರು ಬೂದಿ ತುಂಬಿಕೊಂಡು ವಾಡಿಯತ್ತತೆರೆಳುತಿತ್ತು.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.