ಯಾದಗಿರಿ: ಗೋಗಿ ಪೊಲೀಸ್ ಠಾಣೆಯ ಹೊಸಕೇರಾ ಗ್ರಾಮದ ಸಿಮಾಂತರದ ಹೊಲದಲ್ಲಿ ಹತ್ತಿ ಬೆಳೆ ನಡುವೆ ಗಾಂಜಾ ಬೆಳೆದಿರುವುದು ಬಗ್ಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಗೋಗಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹೋಸಕೇರಾ ಗ್ರಾಮದ ದೇವೇಂದ್ರಪ್ಪ ತಂದೆ ಗೂಳಪ್ಪ ಕಿಲಾರಿ ಇವರ ಹೊಲದಲ್ಲಿ ಹತ್ತಿ ಬೆಳೆದಿದೆ.
ಬೆಳೆದ 16 ಗಾಂಜಾ ಗಿಡಗಳನ್ನು ಪಂಚರ ಸಮಕ್ಷೇಮ ಕಿತ್ತಿ ಮಣ್ಣನ್ನು ತೆಗೆದು ತೂಕ ಮಾಡಲಾಗಿ ಒಟ್ಟು 3 ಕೆ.ಜಿ. 162 ಗ್ರಾಂ. ಅಂದಾಜು ಮೌಲ್ಯ 10,000/- ರೂ ಎಂದು ಅಂದಾಜಿಸಲಾಗಿದೆ.
ಗಾಂಜಾ ವಶಪಡಿಸಿಕೊಂಡು ಗೋಗಿ ಠಾಣಾದಲ್ಲಿ ಪ್ರಕರಣ ದಾಖಲಿಸಕೊಂಡು ಆರೋಪಿ ದೇವೇಂದ್ರಪ್ಪನಿಗೆ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಡಾ. ವೇದಮೂರ್ತಿ ಪೊಲೀಸ್ ಅಧೀಕ್ಷಕರು ಯಾದಗಿರಿ ತಿಳಿಸಿದ್ದಾರೆ.