News Karnataka Kannada
Monday, April 29 2024
ವಿಜಯನಗರ

ಮತಾಂತರ ನಿಲ್ಲಸಿ…ಇಲ್ಲ ಒದ್ದು ಓಡಿಸುತ್ತೆವೆ: ಕೈಸ್ತರಿಗೆ ಮುತಾಲಿಕ್‌ ಎಚ್ಚರಿಕೆ!

Mutalik
Photo Credit : News Kannada

ವಿಜಯನಗರ: ರಾಜ್ಯದಲ್ಲಿ 3.600ರಷ್ಟು ಲಂಬಾಣಿ ತಾಂಡಗಳಿದ್ದು, ಅವರ ಮುಗ್ಧತೆಯನ್ನು ಕ್ರೈಸ್ತರು ಬಲವಾಗಿಟ್ಟುಕೊಂಡು ಶೇ 50 ರಷ್ಟು ತಾಂಡಗಳಿಗೆ ಪ್ರವೇಶಿಸಿ ಮತಾಂತರ ಯತ್ನದಲ್ಲಿ ತೊಡಗಿದ್ದಾರೆ. ಈ ಪ್ರಯತ್ನವನ್ನು ನಿಲ್ಲಿಸದಿದ್ದರೆ ಶ್ರೀ ರಾಮ ಸೇನೆ ವಿಶೇಷ ಸೇನೆ ರಚಿಸಿಕೊಂಡು ಅವರನ್ನು ಒದ್ದು ಓಡಿಸಲಿದ್ದೇವೆ ಎಂದು ಸಂಘಟನೆಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ವ್ಯಾಕ್ಯ ನೀಡಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು,”ನೀಮ್ಮ ಯಾವುದೆ ರೀತಿ ಪ್ರಾರ್ಥನೆ,ಭಜನೆ ನಿಮ್ಮ ಮನ ಹಾಗೂ ಚರ್ಚ ಒಳಗೆ ಇಟ್ಟುಕೊಳ್ಳಿ ತಾಂಡಗಳಿಗೆ ಮೋಸ ಮಾಡಿದರೆ ನಿಮ್ಮ ಈ ಅನ್ಯಾಯದ ಕೆಲಸವನ್ನು ಯೇಸು ಒಪ್ಪಲಾರ “ಎಂದರು

ಹಿಂದುಳಿದ ಜನಾಂಗವಾದ ತಾಂಡಗಳ ಬಡತನ,ಅನಕ್ಷರತೆಯನ್ನು ಬಳಸಿ, ಅವರಿಗೆ ಆಸೆ ಹುಟ್ಟಿಸಿ ಮಾಡುವ ಮತಾಂತರ ಯತ್ನವನ್ನು ತಕ್ಷಣ ನಿಲ್ಲಿಸಬೆಕು. ನಮ್ಮ ಧರ್ಮದಲ್ಲು,ನಮ್ಮ ದೇವರು ನಮಗೆ ಸುಖ,ಶಾಂತಿ ನೀಡುತಿದ್ದಾನೆ.ಇಲ್ಲಸಲ್ಲದ ತಪ್ಪುಮಾಹಿತಿ ನೀಡಿ ಈ ರೀತಿ ಮಾಡುವುದನ್ನು ಸರ್ಕಾರ ಹಿಮ್ಮೆಟ್ಟಬೇಕು. ಮತಾಂತರ ನಿಷೇಧ ಕಾಯ್ದೆ ಗೌರವ ನೀಡಿ ಅದನ್ನು ಪಾಲಿಸುವುದು ಧರ್ಮ “ಎಂದು ಮುತಾಲಿಕ್‌ ಹೇಳಿದರು.

ಪ್ರಧಾನಿ ಮೋದಿ ಅವರನ್ನು ಹೊಗಳಿ ಮಾತನಾಡಿದ ಅವರು”ಮೋದಿ ಅವರು ಅದ್ಭುತ ಕೆಲಸ ಮಾಡುತಿದ್ದದಾರೆ, 2014 ರ ಹಿಂದಿನ ಪ್ರಧಾನಿಗಳು ದರ್ಗಾ,ಚರ್ಚ್‌ ಗಳಿಗೆ ಹೊಗಿದ್ದಾರೆ ಆದರೆ ಹಣೆಗೆ ವಭೂತಿ ಬಳಿದು ದೆವಸ್ಥಾನಕ್ಕೆ ಹೋಗಿದ್ದು ನರೇಂದ್ರ ಮೋದಿ ಮಾತ್ರ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 400ಕ್ಕಿಂತ ಹೆಚ್ಚು ಸ್ಥಾನ ಗಳಿಸುವುದ ಕಚಿತ .2024ರ ನಂತರ ಭಾರತ ಸಂಪೂರ್ಣ ಹಿಂದೂ ರಾಷ್ಟ್ರ ಆಗುವುದು ಸಹ ನಿಶ್ಚಿತ”ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಹಿಂದೂ ರಾಷ್ಟ್ರ ಎಂದಾಗ ಹಿಂದೂಮಾತ್ರವಲ್ಲ ಇಲ್ಲಿ ಮುಸ್ಲಿಮರು ಇದ್ದಾರೆ,ಕ್ರೈಸ್ತರು ಇದ್ದಾರೆ, ಅವರ ಗತಿ ಏನೆಂದು ಕೇಳುವವರಿದ್ದಾರೆ. ಹಿಂದೂ ಆಚರಣೆ,ಸಂಸ್ಕೃತಿ ಯನ್ನು ಗೌರವಿಸಿದರೆ ಯಾವುದೆ ತೊಂದರೆ ಇಲ್ಲ”ಎಂದರು

ರಾಮಮಂದಿರದಲ್ಲಿ ಏಕೆ ರಾಜಾಕೀಯ ಅಧಿಕಾರ ತೆಗೆದುಕೊಳ್ಳಬಾರದು! ಇಡೀ ದೇಶದಲ್ಲೆ ರಾಮನ ಪರ ನಿಂತಿದ್ದು ಬಿಜೆಪಿ ಪಕ್ಷ ,ಜೊತೆಗೆ ಆರ್‌ಎಸ್ಸೆಸ್‌ ವಿ ಎಚ್‌ ಪಿ ಹಾಗೂ ಶ್ರೀ ರಾಮ ನಂತಹ ಸಂಘಟನೆಗಳು. ಈ ಮೂಲಕ ನಾವು ತ್ಯಾಗ ಮಾಡಿದ್ದೇವೆ ಆದರೆ ಕಾಂಗ್ರೆಸ್‌ ಮಾತ್ರ ಬಾಬರನ ಪರ ನಿಂತಿತ್ತು.ರಾಮನ ಹೆಸರು ಹೇಳಲು ಕಾಂಗ್ರೆಸಿಗರಿಗೆ ಯೋಗ್ಯತೆ ಇಲ್ಲ .ನಾವು ರಾಮ ರಾಜ್ಯ ಸ್ಥಾಪಿಸುವ ಉದ್ದೇಶದಿಂದ ರಾಮಸ್ಮರಣೆ ಮಾಡುತ್ತೇವೆಯೆ ಹೊರತು ಸ್ವಾರ್ಥಕ್ಕಾಗಿ ಅಲ್ಲ ʼಎಂದರು

“ನಾವು ರಾಮಂದಿರ ಸ್ಥಾಪಿಸುವುತ್ತೆವೆ ಎಂದು ಕಾಂಗ್ರೆಸಿಗರು ಬರೀ ಬುರುಡೆ ಬಿಡುತ್ತಾರೆ. ಬಜಟ್‌ನಲ್ಲಿ ಇದಕ್ಗಿಕಾ ಒಂದು ರೂಪಾಯಿ ಕೂಡ ಮೀಸಲಿಲ್ಲ,ಕ್ರೈಸ್ತ,ಮುಸ್ಲಿಮರಿಗೆ ನೀಡಲು ಹಣವಿದೆ ಆದರೆ ರಾಮಮಂದಿರಕ್ಕೆ ಏಕಿಲ್ಲ”ಎಂದು ಪ್ರಶ್ನಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು