ರಾಯಚೂರು: ಕೊರೊನಾ ಬಳಿಕ ಇನ್ಫ್ಲುಯೆನ್ಜ ವೈರಸ್ ಹಾವಳಿ ಸದ್ದು ಮಾಡುತ್ತಿದೆ. ಜಿಲ್ಲೆಯಲ್ಲಿ ಇನ್ಫ್ಲುಯೆನ್ಜ ವೈರಸ್ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ನೆಗಡಿ, ಕೆಮ್ಮು, ಜ್ಚರ ಹಾಗೂ ಮೈ ಕೈ ನೋವಿನಿಂದ ಜನ ಕಂಗಾಲಾಗಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಜನ ನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.
ಸದ್ಯ ಚೀನಾದಲ್ಲಿ ಹೊಸ ನಮೂನೆಯ ಸೋಂಕು ಹರಡುತ್ತಿರುವುದರಿಂದ ಜನರು ಹೆಚ್ಚು ಆತಂಕಗೊಂಡಿದ್ದಾರೆ. ನೆಗಡಿ, ಕೆಮ್ಮು, ಜ್ವರ, ಮೈಕೈ ನೋವಿನಿಂದ ಬಳಲುತ್ತಿರುವ ಜನರು ಭಯಭೀತಾರಾಗಿದ್ದಾರೆ.
ಸದ್ಯ ಜನರಲ್ಲಿರುವ ಆತಂಕವನ್ನು ಹೊಡೆದೋಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಲಸ ಮಾಡುತ್ತಿದೆ. ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.