News Karnataka Kannada
Saturday, April 27 2024
ರಾಯಚೂರು

ರಾಯಚೂರು: ಮಸ್ಕಿ ಶಾಲೆಯ ನೀರಿನ ತೊಟ್ಟಿಯಲ್ಲಿ ನಾಗರಹಾವು ಪತ್ತೆ

He threw diesel on the cobra and went to the hospital with a snake-like burning sensation
Photo Credit : Pixabay

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯಿತಿಯ ಬುದ್ದಿನಿ  ಎಸ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೀರಿನ ತೊಟ್ಟಿಯಲ್ಲಿ (ಸಂಪ್) ನಾಗರಹಾವು ಕಾಣಿಸಿಕೊಂಡಿದೆ.

ವಿಷಯ ತಿಳಿದ ಬುದ್ದಿನಿ ಎಸ್ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ನಾಗರದಪ್ಪ ದೇವರಮನಿ ಮತ್ತು ಮುಖಂಡ ಬಸವರಾಜ ಈಳಿಗೇರ ಅವರು ಮಸ್ಕಿಯಿಂದ ಹಾವು ಹಿಡಿಯುವ ಶಾಂತಯ್ಯಸ್ವಾಮಿ ಅವರನ್ನು ಕರೆತಂದು ನೀರಿನಲ್ಲಿ ನಾಗರಹಾವನ್ನು ಹಿಡಿದು ರಕ್ಷಿಸಿದ್ದಾರೆ.

ನಂತರ ಹಾವನ್ನು ದೂರದ ಕಾಡಿಗೆ ಬಿಡಲಾಯಿತು. ಶಾಲೆಯ ಪ್ರಾಂಶುಪಾಲ ಕಳಕಪ್ಪ ಹಾದಿಮನಿ, ಶಿಕ್ಷಕ ಆದೇಶ್ ಸನಬಾಳ, ಗ್ರಾಮಸ್ಥ ಪಂಪಣ್ಣ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು