ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯಿತಿಯ ಬುದ್ದಿನಿ ಎಸ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೀರಿನ ತೊಟ್ಟಿಯಲ್ಲಿ (ಸಂಪ್) ನಾಗರಹಾವು ಕಾಣಿಸಿಕೊಂಡಿದೆ.
ವಿಷಯ ತಿಳಿದ ಬುದ್ದಿನಿ ಎಸ್ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ನಾಗರದಪ್ಪ ದೇವರಮನಿ ಮತ್ತು ಮುಖಂಡ ಬಸವರಾಜ ಈಳಿಗೇರ ಅವರು ಮಸ್ಕಿಯಿಂದ ಹಾವು ಹಿಡಿಯುವ ಶಾಂತಯ್ಯಸ್ವಾಮಿ ಅವರನ್ನು ಕರೆತಂದು ನೀರಿನಲ್ಲಿ ನಾಗರಹಾವನ್ನು ಹಿಡಿದು ರಕ್ಷಿಸಿದ್ದಾರೆ.
ನಂತರ ಹಾವನ್ನು ದೂರದ ಕಾಡಿಗೆ ಬಿಡಲಾಯಿತು. ಶಾಲೆಯ ಪ್ರಾಂಶುಪಾಲ ಕಳಕಪ್ಪ ಹಾದಿಮನಿ, ಶಿಕ್ಷಕ ಆದೇಶ್ ಸನಬಾಳ, ಗ್ರಾಮಸ್ಥ ಪಂಪಣ್ಣ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.