ರಾಯಚೂರು: ಇತ್ತೀಚಿನ ದಿನಗಳ ಕೋಮುಸೌಹಾರ್ದ ಎಂಬ ಪದಕ್ಕೆ ಅರ್ಥವೇ ಇಲ್ಲವೆಂಬಂತೆ ಆಗಿದೆ. ಪ್ರತಿ ಸಮುದಾಯದ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿ ಮನುಷ್ಯ ಮನುಷ್ಯರನ್ನು ನಂಬದ ಸ್ಥಿತಿ ನಿರ್ಮಾಣವಾಗಿದೆ.
ಆದರೆ ಕೋಮುಭಾವಕ್ಯತೆಗೆ ಉದಾಹರಣೆಯೆಂಬಂತಹ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಮುಸಲ್ಮಾನರ ಮನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಮುಸ್ಲಿಂ ಮುಖಂಡರಾದ ಬಿ.ಎ.ಕರೀಮ್ ಸಾಬ್ ಮನೆಯಲ್ಲಿ 50ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಪೂಜೆ ನಂತರ ತಾವೇ ಖುದ್ದಾಗಿ ಪ್ರಸಾದ ಬಡಿಸಿದ್ದಾರೆ.