ರಾಯಚೂರು: ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿವೆ. ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂ ಪ್ರಕರಣದಿಂದಾಗಿ ಮೂವರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕ್ಯೂರಿ ಫಾರ್ಮ ಆಸ್ಪತ್ರೆಗೆ ಡೆಂಗ್ಯೂ ಶಂಕೆಯಿಂದಾಗಿ ನವೀನ್, ವೀರೇಶ್ ಹಾಗೂ ದೀಪಾ ಎಂಬುವರು ದಾಖಲಾಗಿದ್ದರು. ಚಿಕಿತ್ಸೆ ಕೂಡ ವೈದ್ಯರು ನೀಡಲಾಗುತ್ತಿತ್ತು.
ಕಳೆದ ರಾತ್ರಿ ಡೆಂಗ್ಯೂ ಶಂಕೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ದೀಪಾ, ನವೀನ್ ಹಾಗೂ ವೀರೇಶ್ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡಂತ ಮೃತರ ಪೋಷಕರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ. ಇದರಿಂದಾಗಿ ವೈದ್ಯ ಭಾನುಪ್ರಕಾಶ್ ಹಾಗೂ ಸಿಬ್ಬಂದಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.