News Karnataka Kannada
Wednesday, May 01 2024
ಕಲಬುರಗಿ

ಕೊನೆಗೂ ಮೈತ್ರಿಕೂಟಕ್ಕೆ ಜೈ ಎಂದ ಶಾಸಕ ಕಂದಕೂರ

ರಾಯಚೂರು ಲೋಕಸಭಾ ಕ್ಷೇತ್ರ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರ ಹಾಗೂ ಸುರಪುರ ಉಪ ಚುನಾವಣೆ ಕ್ಷೇತ್ರಗಳಲ್ಲಿ ನಾನು ಸಂಪೂರ್ಣ ಸಮಯ ಕೊಟ್ಟು ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸ್ಪಷ್ಟ ಪಡಿಸಿದ್ದಾರೆ.
Photo Credit : NewsKarnataka

ಕಲಬುರಗಿ: ರಾಯಚೂರು ಲೋಕಸಭಾ ಕ್ಷೇತ್ರ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರ ಹಾಗೂ ಸುರಪುರ ಉಪಚುನಾವಣೆ ಕ್ಷೇತ್ರಗಳಲ್ಲಿ ನಾನು ಸಂಪೂರ್ಣ ಸಮಯ ಕೊಟ್ಟು ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸ್ಪಷ್ಟ ಪಡಿಸಿದ್ದಾರೆ.

ತಮ್ಮ ಗೃಹ ಕಚೇರಿಯಲ್ಲಿ ಕೈಗೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಲೋಕಸಭೆ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತ್ತು ಸುರಪೂರ ವಿಧಾನಸಭೆ ಅಭ್ಯರ್ಥಿ ರಾಜುಗೌಡ ಕೂಡ ಭೇಟಿಯಾಗಿ ಬೆಂಬಲ ಕೋರಿದ್ದು, ಹಾಗೆ ನಮ್ಮ ರಾಜ್ಯ ಜೆಡಿಎಸ್ ನಾಯಕರು ಕೂಡ ನನ್ನ ಜೊತೆ ಚರ್ಚೆ ಮಾಡಿದ್ದು, ಮೈತ್ರಿ ಕುರಿತು ಪರ ವಿರೋಧ ಚಿಂತನೆ ನಡೆಸಲಾಗಿ ಅಷ್ಟೆ ಅಲ್ಲದೆ ಸುದೀರ್ಘವಾಗಿ ನಾಯಕರ ಜೊತೆ ಹಾಗೂ ಕುಟುಂಬದವರ ಜೊತೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದರು.

ಕಲಬುರಗಿ, ಯಾದಗಿರಿ ಜೆಡಿಎಸ್‌ನ ನಾಯಕರು, ಸ್ಥಳೀಯ ನಾಯಕರ ಸಾಧಕ ಬಾಧಕಗಳ ಚರ್ಚೆ ನಡೆಸಿದ್ದು, ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರಡ್ಡಿಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ, ದೊಡ್ಡಪ್ಪಗೌಡ ನರಬೋಳಿ ಸೇರಿದಂತೆ ಹಲವು ನಾಯಕರ ಜೊತೆ ಚರ್ಚೆ ನಡೆಸಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಬಿಜೆಪಿ ಪಕ್ಷದ ಜೊತೆ ಜೆಡಿಎಸ್ ಪಕ್ಷ ಜೊತೆ ಮೈತ್ರಿ ಮಾಡಿಕೊಂಡ ಕಾರಣ ನನಗೆ ವೈಯಕ್ತಿಕವಾಗಿ ಅಸಮಧಾನವಿತ್ತು ಆದರೇ ನಮ್ಮ ರಾಜ್ಯದ ನಾಯಕರ ಆದೇಶದಂತೆ ನಡೆಯಬೇಕಾಗುತ್ತಿದ್ದು, ಅದರ ಜೊತೆಗೆ ಬಿಜೆಪಿ ರಾಜ್ಯ ಅಧ್ಯಕ್ಷ ವಿಜೆಯೇಂದ್ರ ಅವರು ನನಗೆ ಕರೆ ಮಾಡಿ ನಾಳೆ ನಡೆಯುವ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ನಾಮಪತ್ರ ಸಲ್ಲಿಸಲು ತಮ್ಮ ಉಪಸ್ಥಿತಿ ಅಗತ್ಯವಿದೆ ಆದ್ದರಿಂದ ತಾವು ಆಗಮಿಸಬೇಕು ಎಂದು ಕೋರಿದ್ದಾರೆ. ನಾನು ಕೂಡ ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು.

ಮೈತ್ರಿ ಅನಿವಾರ್ಯತೆ ಕುರಿತು ನಮ್ಮ ನಾಯಕರು ನನಗೆ ತಿಳಿಸಿದ್ದರಿಂದ ನಾನು ಜಾಧವ್ ನಾಮಿನೇಶನ್ ಸಂದರ್ಭದಲ್ಲಿ ಉಪಸ್ಥಿತಿ ಇರಲಿದ್ದೇನೆ. ಬಿಜೆಪಿಗೆ ಬೆಂಬಲ ಕೊಡುತ್ತಿದ್ದೇನೆ ಎಂದರು.

ತಂದೆಯವರ ಅನುಪಸ್ಥಿತಿಯಲ್ಲಿ ಮೊದಲ ಚುನಾವಣೆ ಎದುರಿಸುತ್ತಿದ್ದೇನೆ ಗುರುಮಠಕಲ್ ಕ್ಷೇತ್ರದ ಜನರೊಂದಿಗೆ ಚರ್ಚೆ ಮಾಡಿ ಅವರೊಡನೆ ಕೇಳಿದಾಗ ನಿಮ್ಮ ನಿರ್ಧಾರ ಕ್ಕೆ ಬದ್ದರಾಗಿದ್ದೇವೆ ಎಂದು ತಿಳಿಸಿದ್ದು,

ಜೆಡಿಎಸ್ ಪಕ್ಷದ ಗುರಮಿಠಕಲ್ ಮತಕ್ಷೇತ್ರದ ಕಾರ್ಯಕರ್ತರ ಜೊತೆ ಸಭೆ ಮಾಡಿದ್ದಾಗ ನೀವು ಶಾಸಕರಾಗಿ ರಾಜಕೀಯವಾಗಿ ಏನೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾವು ಬದ್ದರಿದ್ದೇವೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ ಎಂದು ಕಂದಕೂರ ತಿಳಿಸಿದರು.

ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು