ಕಲಬುರಗಿ: ಜಿಲ್ಲೆಯಲ್ಲಿ ಹಾಡಹಗಲೇ ವಕೀಲನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ನೀಲಕಂಠ ಪಾಟೀಲ್ ಎಂಬ ಆರೋಪಿಯನ್ನು ಗುಲ್ಬರ್ಗಾ ವಿವಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.7 ರಂದು ಕಲಬುರಗಿ ನಗರದ ಶ್ರಿಗಂಗಾ ವಿಹಾರ ಅರ್ಪಾಟ್ಮೆಂಟ್ ನಲ್ಲಿ ವಕೀಲನನ್ನ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಲ್ಲದೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿತ್ತು.
ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ರು. ಆದರೆ ಪ್ರಮುಖ ಆರೋಪಿ ಏಸ್ಕೇಪ್ ಆಗಿದ್ದ, ನಿನ್ನೆ ತಡರಾತ್ರಿ ಪೊಲೀಸರು ಆರೋಪಿ ನೀಲಕಂಠನನ್ನ ಹೆಡೆಮುರಿ ಕಟ್ಟಿದ್ದಾರೆ.