ಕೊಪ್ಪಳ: ಹಟ್ಟಿಗೆ ನುಗ್ಗಿ ಕುರಿಗಳನ್ನು ತಿಂದು ಬಳಿಕ ಚಿರತೆ ಅಲ್ಲಿಯೇ ನಿದ್ದೆಗೆ ಜಾರಿದ ಪ್ರಸಂಗವೊಂದು ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ತಾಲೂಕಿನ ಬಸವನ ದುರ್ಗ ಕ್ಯಾಂಪ್ನ ಗುಡ್ಡದ ಮೇಲೆ ನಡೆದಿದೆ.
ಕುರಿಗಾಹಿಗಳು ಹಟ್ಟಿಯಲ್ಲಿ ಕುರಿಗಳನ್ನು ಹಾಕಿದ್ದರು. ರಾತ್ರಿ ವೇಳೆ ಚಿರತೆ ಹಟ್ಟಿಗೆ ಬಂದು, ಎರಡು ಕುರಿಗಳನ್ನ ತಿಂದು ಹಟ್ಟಿಯಲ್ಲಿಯೇ ಮಲಗಿದೆ.
ರಮೇಶ ಕುರುಬರ ಎಂಬವರಿಗೆ ಈ ಕುರಿಗಳು ಸೇರಿವೆ. ಇದರ ವೀಡಿಯೋವನ್ನು ಕುರಿಗಾಹಿ ಸೆರೆಹಿಡಿದಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಹಟ್ಟಿಗೆ ಆಗಮಿಸುತ್ತಿದ್ದಂತೆಯೇ ಚಿರತೆ ತಪ್ಪಿಸಿಕೊಂಡು ಗುಡ್ಡದ ಕಡೆ ಓಡಿದೆ.