News Karnataka Kannada
Tuesday, April 30 2024
ಕೊಪ್ಪಳ

ಇಎಮ್‍ಐ ನಿಂದ ಅಪೌಷ್ಟಿಕತೆ ನಿರ್ಮೂಲನಾ ಅಭಿಯಾನ

A pilot concept to End Malnutrition
Photo Credit : News Kannada

ಕೊಪ್ಪಳ(ಯಲಬುರ್ಗಾ):  ಅಪೌಷ್ಟಿಕತೆಯ ಹೊರೆಯನ್ನು ಕಡಿಮೆ ಮಾಡುವ ಒಂದು  ಸಾರ್ವಜನಿಕ ಆರೋಗ್ಯ ಪರಿಕಲ್ಪನೆಯನ್ನು, ಎಡ್ವರ್ಡ್ ಮತ್ತು ಸಿಂಥಿಯಾ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ಯೆನೆಪೊಯ ಜೊತೆಗಿನ ಸಿಎಚ್‍ಡಿ ಗ್ರೂಪ್ ಮತ್ತು ಸುಧಾರಿತ ತಾಂತ್ರಿಕ ಸಹಕಾರ ಕೇಂದ್ರದ ಒಂದು ಘಟಕ) ಅಪೌಷ್ಟಿಕತೆ ನಿರ್ಮೂಲನಾ ಅಭಿಯಾನ ಕಾರ್ಯಕ್ರಮವನ್ನು ಯಲಬುರ್ಗಿಯಲ್ಲಿ ಹಮ್ಮಿಕೊಂಡಿತ್ತು.

ಈ ಉಪಕ್ರಮವನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಕೋನದಿಂದ ಪ್ರಾಯೋಗಿಕವಾಗಿ ನಡೆಸಲಾಯಿತು ಮತ್ತು  ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಅಂಗನವಾಡಿಯಲ್ಲಿ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮವಾಗಿ ಜಾರಿಗೊಳಿಸಲಾಯಿತು. ಈ ಉಪಕ್ರಮವು ತೀವ್ರವಾದ ಅಪೌಷ್ಟಿಕತೆ ಹೊಂದಿರುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಅಪೌಷ್ಟಿಕತೆಯನ್ನು ಕಡಿಮೆಗೊಳಿಸುವ ಮತ್ತು ಮಧ್ಯಮ ತೀವ್ರ ಅಪೌಷ್ಟಿಕತೆಯ ಹೊರೆಯನ್ನು ಕಡಿಮೆ ಮಡುವ ಗುರಿಯನ್ನು ಹೊಂದಿದೆ.

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಹಕಾರ ಸಿಎಚ್‍ಡಿ ಗ್ರೂಪ್ ಇದನ್ನು ಅನುಷ್ಠಾನಗೊಳಿಸಿದೆ.  ಆಗಸ್ಟ್ 2022ರಲ್ಲಿ 31 ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಂದ, ಮಾರ್ಚ್ 2023ರಲ್ಲಿ ಸಂಖ್ಯೆ 11ಕ್ಕೆ ಇಳಿದಿದೆ. ಅಂತೆಯೇ ಸೆಪ್ಟೆಂಬರ್ 2022ರಲ್ಲಿ 1067 ಮಧ್ಯಮ ತೀವ್ರ ಅಪೌಷ್ಟಿಕತೆಯ ಮಕ್ಕಳಿಂದ, ಮಾರ್ಚ್ 2023ರಲ್ಲಿ ಸಂಖ್ಯೆ 329ಕ್ಕೆ ಇಳಿದಿದೆ.

ಇನ್ನು ಈ ಕಾರ್ಯಕ್ರಮದ ವೇಳೆ ಐದು ವರ್ಷದೊಳಗಿನ ಮಕ್ಕಳ ಪಾಲಕರು, ಅಂಗನವಾಡಿ ಮೇಲ್ವಿಚಾರಕರು, ಸಮುದಾಯದ ಹಿರಿಯರು, ಚುನಾಯಿತ ಪ್ರತಿನಿಧಿಗಳು,  ಮುಖಂಡರು ಭಾಗಿಯಾಗಿದ್ದರು.

ಎಡ್ವರ್ಡ್ ಮತ್ತು ಸಿಂಥಿಯಾ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‍ನ ನಿರ್ದೇಶಕ ಡಾ. ಎಡ್ಮಂಡ್ ಫೆನಾರ್ಂಡಿಸ್ ಈ ವಿಷಯದ ಕುರಿತು ಮಾತನಾಡುತ್ತಾ, ಇಂತಹ ಪರಿಕಲ್ಪನೆಗಳು 2030ರ ವೇಳೆಗೆ ಭಾರತದಿಂದ ಅಪೌಷ್ಟಿಕತೆಯನ್ನು ತೊಡೆದುಹಾಕಬಹುದು. ಆದರೆ ಗಂಭೀರವಾದ ರಾಜಕೀಯ ಇಚ್ಛಾಶಕ್ತಿ, ಸಾಪ್ತಾಹಿಕ, ಬೆಂಬಲಿತ ಮೇಲ್ವಿಚಾರಣೆ ಮತ್ತು ಪೋಷಕರ ಸಹಕಾರದ ಅಗತ್ಯವಿದೆ ಎಂದು ಹೇಳಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು