ಕುಷ್ಟಗಿ : ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಬಸವರಾಜ್ ನಾಗಪ್ಪ ಮಸ್ಕಿ ಕುಟುಂಬದಲ್ಲಿ ನೋವು ಮರೆಯುವ ಮುನ್ನವೇ ಮತ್ತೊಂದು ಸಾವು ಬರ ಸಿಡಿಲಿನ ಆಘಾತ ತಂದಿದೆ.
ಕಳೆದ ಭಾನುವಾರ 25 ರ ಯುವಕ ಬಸವರಾಜ್ ನಾಗಪ್ಪ ಮಸ್ಕಿ ಹುಲಿಯಾಪೂರ ಕೆರೆಯಲ್ಲಿ ಜೀವಂತ ಸಮಾಧಿಯಾಗಿದ್ದ. ಈ ನಿಧನ ವಾರ್ತೆ ಕೇಳಿದ್ದ ಬೆಂಗಳೂರಿನಲ್ಲಿದ್ದ ಮೃತ ಬಸವರಾಜ್ ನ ಸಹೋದರ ಸಂಬಂಧಿ (ದೊಡ್ಡಪ್ಪನ ಮಗ) ಈರಪ್ಪ ಮಸ್ಕಿ ಹಾಗೂ ಅವರ ಕೌಟುಂಬಿಕ ಸಂಬಂಧಿಕ ರಾಜು ತೋಟದ ಇವರೀರ್ವರು ಸೋಮವಾರ ಬೆಂಗಳೂರಿನಿಂದ ನೀರಲೂಟಿಗೆ ಬೈಕ್ ನಲ್ಲಿ ಅಂತ್ಯಕ್ರಿಯೆ ಗೆ ಬರುತ್ತಿದ್ದ ವೇಳೆ ಕೂಡ್ಲಿಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ, ರಾಜು ಎಂಬವರು ಸಾವನ್ನಪ್ಪಿದ್ದಾರೆ.
ಕುಷ್ಟಗಿ ತಾಲೂಕಿನ ನೀರಲೂಟಿ ನಿವಾಸಿ ಈರಪ್ಪ ಮಸ್ಕಿ ಬೈಕ್ ಚಲಾಯಿಸುತ್ತಿದ್ದರು. ಇದೇ ತಾಲೂಕಿನ ಹಿರೇಮನ್ನಾಪೂರ ನಿವಾಸಿ ರಾಜು ತೋಟದ್, ಹಿಂಬದಿಯ ಸವಾರರಾಗಿದ್ದರು. ಈ ವೇಳೆ ಕಾನಾಹೊಸಳ್ಳಿ ಬಳಿ ಹೆದ್ದಾರಿ ಡಿವೈಡರ್ ಗೆ ಢಿಕ್ಕಿಯಾಗಿ ಹಿಂಬದಿಯ ಸವಾರ ರಾಜು ತೋಟದ್ ತೀವ್ರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹಿಂಬಂದಿಯ ಸವಾರ ಈರಪ್ಪ ಮಸ್ಕಿ ಗಂಭೀರ ಗಾಯಗೊಂಡಿದ್ದು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಲಿಯಾಪೂರ ಕೆರೆಯಲ್ಲಿ ಮೃತ ಪಟ್ಟಿದ್ದವನ ಅಂತ್ಯಕ್ರಿಯೆಗೆ ಬರುತ್ತಿದ್ದ ರಾಜು ತೋಟದ್ ದುರಂತ ಸಾವು ಕುಟುಂಬದವರನ್ನು ಕಂಗಾಲಾಗಿಸಿದೆ. ರಾಜು ತೋಟದ್ ಜೀವನ ನಿರ್ವಹಣೆಗೆ ಬೆಂಗಳೂರಿನಲ್ಲಿ ಕಾರ್ಮಿಕನಾಗಿದ್ದು, ಕ್ರಿಕೆಟ್ ಆಟಗಾರನಾಗಿದ್ದ.
ಮೇ.15 ರಿಂದ ಆರಂಭವಾಗಿದ್ದ ಎಸ್ಎಸ್ಎಲ್ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು ರಾಜ್ಯ…
ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್ನಲ್ಲಿ ಮನೆಗೆ ಹೋಗುವಾಗ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…
ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…
ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…