News Karnataka Kannada
Tuesday, April 30 2024
ಕೊಪ್ಪಳ

ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್ : ಓರ್ವ ಸಾವು

8 passengers seriously injured in private bus accident
Photo Credit :

ಕುಷ್ಟಗಿ : ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಬಸವರಾಜ್ ನಾಗಪ್ಪ ಮಸ್ಕಿ ಕುಟುಂಬದಲ್ಲಿ ನೋವು ಮರೆಯುವ ಮುನ್ನವೇ ಮತ್ತೊಂದು ಸಾವು ಬರ ಸಿಡಿಲಿನ ಆಘಾತ ತಂದಿದೆ.

ಕಳೆದ ಭಾನುವಾರ 25 ರ ಯುವಕ ಬಸವರಾಜ್ ನಾಗಪ್ಪ ಮಸ್ಕಿ ಹುಲಿಯಾಪೂರ ಕೆರೆಯಲ್ಲಿ ಜೀವಂತ ಸಮಾಧಿಯಾಗಿದ್ದ. ಈ ನಿಧನ ವಾರ್ತೆ ಕೇಳಿದ್ದ ಬೆಂಗಳೂರಿನಲ್ಲಿದ್ದ ಮೃತ ಬಸವರಾಜ್ ನ ಸಹೋದರ ಸಂಬಂಧಿ (ದೊಡ್ಡಪ್ಪನ ಮಗ) ಈರಪ್ಪ ಮಸ್ಕಿ ಹಾಗೂ ಅವರ ಕೌಟುಂಬಿಕ ಸಂಬಂಧಿಕ ರಾಜು ತೋಟದ ಇವರೀರ್ವರು ಸೋಮವಾರ ಬೆಂಗಳೂರಿನಿಂದ ನೀರಲೂಟಿಗೆ ಬೈಕ್ ನಲ್ಲಿ ಅಂತ್ಯಕ್ರಿಯೆ ಗೆ ಬರುತ್ತಿದ್ದ ವೇಳೆ ಕೂಡ್ಲಿಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ, ರಾಜು ಎಂಬವರು ಸಾವನ್ನಪ್ಪಿದ್ದಾರೆ.

ಕುಷ್ಟಗಿ ತಾಲೂಕಿನ ನೀರಲೂಟಿ ನಿವಾಸಿ ಈರಪ್ಪ ಮಸ್ಕಿ ಬೈಕ್ ಚಲಾಯಿಸುತ್ತಿದ್ದರು. ಇದೇ ತಾಲೂಕಿನ ಹಿರೇಮನ್ನಾಪೂರ ನಿವಾಸಿ ರಾಜು ತೋಟದ್, ಹಿಂಬದಿಯ ಸವಾರರಾಗಿದ್ದರು. ಈ ವೇಳೆ ಕಾನಾಹೊಸಳ್ಳಿ ಬಳಿ ಹೆದ್ದಾರಿ ಡಿವೈಡರ್ ಗೆ ಢಿಕ್ಕಿಯಾಗಿ ಹಿಂಬದಿಯ ಸವಾರ ರಾಜು ತೋಟದ್ ತೀವ್ರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹಿಂಬಂದಿಯ ಸವಾರ ಈರಪ್ಪ‌ ಮಸ್ಕಿ ಗಂಭೀರ ಗಾಯಗೊಂಡಿದ್ದು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಲಿಯಾಪೂರ ಕೆರೆಯಲ್ಲಿ‌ ಮೃತ ಪಟ್ಟಿದ್ದವನ ಅಂತ್ಯಕ್ರಿಯೆಗೆ ಬರುತ್ತಿದ್ದ ರಾಜು ತೋಟದ್ ದುರಂತ ಸಾವು ಕುಟುಂಬದವರನ್ನು ಕಂಗಾಲಾಗಿಸಿದೆ. ರಾಜು ತೋಟದ್ ಜೀವನ ನಿರ್ವಹಣೆಗೆ ಬೆಂಗಳೂರಿನಲ್ಲಿ ಕಾರ್ಮಿಕನಾಗಿದ್ದು, ಕ್ರಿಕೆಟ್ ಆಟಗಾರನಾಗಿದ್ದ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು