ಗಂಗಾವತಿ : ಕೊಪ್ಪಳ ಜಿಲ್ಲೆ ಗಂಗಾವತಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಸಂಘರ್ಷ ತಾರಕ್ಕೇರಿದೆ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಕಾಲೇಜು ಪ್ರವೇಶಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಸಿಬ್ಬಂದಿ-ಪೋಷಕರ ನಡುವೆ ವಾಕ್ಸಮರವೇ ನಡೆದಿದೆ. ಇನ್ನು ಕಾಲೇಜಿನ ಸುತ್ತಮುತ್ತ 144 ಸೆಕ್ಷನ್ ಜಾರಿ ಇದೆಯಿದ್ರೂ ಕ್ಯಾರೆ ಎನ್ನದೇ ಜನ ಗುಂಪು ಗುಂಪಾಗಿ ಸೇರಿ, ಹಲ್ಲೆಗೆ ಮುಂದಾಗಿದ್ದಾರೆ.
ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳನ್ನ ತರಗತಿಗೆ ಸೇರಿಸದೇ ಕಳಿಸಲಾಗಿದ್ದು, ಇದ್ರಿಂದ ರೊಚ್ಚಿಗೆದ್ದ ಪೋಷಕರು ಕಾಲೇಜಿನ ಸಿಬ್ಬಂದಿಗಳೊಂದಿಗೆ ವಾಕ್ಸಮರಕ್ಕೆ ಇಳಿಸಿದ್ದಾರೆ. ಆಗ ಏಕಾಏಕಿ ಕೆಲವೊಂದು ಸಂಘಟನೆಯ ಸದಸ್ಯರು ಮತ್ತು ಯುವಕರು ಸೇರಿದ್ದು, ಹಲ್ಲೆಗೆ ಮುಂದಾಗಿದ್ದಾರೆ. ನಂತ್ರ ಪೊಲೀಸರು ಗುಂಪು ಚದುರಿಸಿದ್ದು, ವಾತವಾರಣವನ್ನ ತಿಳಿಗೊಳಿಸಿದ್ದಾರೆ.