ಕಲಬುರಗಿ : ಜ.25ರಂದು ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿ ಮೇಲೆ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಫೋಟೋಗ್ರಾಫರ್ ಶಿವಕುಮಾರ್ ಶವದ ಜಾಡು ಹಿಡಿದ ಹೊರಟ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಸ್ವಂತ ಚಿಕ್ಕಮ್ಮನ ಮಗನಿಂದಲೇ ಶಿವಕುಮಾರ್ ಹತ್ಯೆಯಾಗಿದ್ದು, ಕೊಲೆಯ ಕಾರಣ ಬೆಚ್ಚಿಬೀಳಿಸುತ್ತೆ.
ಶಿವಕುಮಾರ್ರ ಚಿಕ್ಕಮ್ಮನ ಮಗ ಮಹಾಂತೇಶ್ ಆಳಂದಕರ್ ಕೊಲೆ ಆರೋಪಿ. ಈತನ ದೊಡ್ಡಪ್ಪನ ಮಗ ಶಿವಕುಮಾರ್. ಫೋಟೋಗ್ರಾಫರ್ ಆಗಿದ್ದ ಶಿವಕುಮಾರ್, ಮಹಾಂತೇಶ್ನ ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಕಣ್ಣಾರೆ ಕಂಡಿದ್ದ ಆಕೆಯ ಮಗ ಮಹಾಂತೇಶ್, ತನ್ನ ಮಾವ ಬಸವರಾಜ್ ಜತೆ ಸೇರಿಕೊಂಡು ಸಹೋದರ ಶಿವಕುಮಾರ್ನ ಹತ್ಯೆಗೆ ಸಂಚು ರೂಪಿಸಿದ್ದ.
ಅದರಂತೆ ಜ.25ರಂದು ಆಳಂದ ತಾಲೂಕಿನ ಶ್ರೀಚಂದ ಗ್ರಾಮದಿಂದ ಶಿವಕುಮಾರ್ನನ್ನು ಮಹಾಂತೇಶ್ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ. ಮಾರ್ಗದಲ್ಲಿ ಶಿವಕುಮಾರ್ನ ರುಂಡ ಕತ್ತರಿಸಿ ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿಗೆ ಎಸೆದು ಪರಾರಿಯಾಗಿದ್ದರು. ಈ ಕೃತ್ಯಕ್ಕೆ ಮಹಾಂತೇಶ್ಗೆ ಸಹಕರಿಸಿದ ಬಸವರಾಜ್ ಸಲಗಾರ್, ಫಕರಿಪ್ಪ ಸಲಗಾರ್, ಸಿದ್ದಾರೂಢ ಕೋರಬಾರ್ ಮತ್ತು ಅಶೋಕ ಜಮಾದಾರ್ ಎಂಬುವರನ್ನೂ ಪೊಲೀಸರು ಬಂಧಿಸಿದ್ದಾರೆ.