News Karnataka Kannada
Sunday, April 28 2024
ಕಲಬುರಗಿ

ಚಿಕ್ಕಮ್ಮನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸಹೋದರ ಕೊಲೆ: ಐವರ ಬಂಧನ

ವೈದ್ಯನೋರ್ವ ಕಾಂಗ್ರೆಸ್ ಮುಖಂಡನ ಹೆಸರನ್ನ ಡೆತ್ ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
Photo Credit : IANS

ಕಲಬುರಗಿ : ಜ.25ರಂದು ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿ ಮೇಲೆ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಫೋಟೋಗ್ರಾಫರ್ ಶಿವಕುಮಾರ್ ಶವದ ಜಾಡು ಹಿಡಿದ ಹೊರಟ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಸ್ವಂತ ಚಿಕ್ಕಮ್ಮನ ಮಗನಿಂದಲೇ ಶಿವಕುಮಾರ್​ ಹತ್ಯೆಯಾಗಿದ್ದು, ಕೊಲೆಯ ಕಾರಣ ಬೆಚ್ಚಿಬೀಳಿಸುತ್ತೆ.

ಶಿವಕುಮಾರ್​ರ ಚಿಕ್ಕಮ್ಮನ ಮಗ ಮಹಾಂತೇಶ್ ಆಳಂದಕರ್ ಕೊಲೆ ಆರೋಪಿ. ಈತನ ದೊಡ್ಡಪ್ಪನ ಮಗ ಶಿವಕುಮಾರ್​. ಫೋಟೋಗ್ರಾಫರ್ ಆಗಿದ್ದ ಶಿವಕುಮಾರ್​, ಮಹಾಂತೇಶ್​ನ ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಕಣ್ಣಾರೆ ಕಂಡಿದ್ದ ಆಕೆಯ ಮಗ ಮಹಾಂತೇಶ್, ತನ್ನ ಮಾವ ಬಸವರಾಜ್ ಜತೆ ಸೇರಿಕೊಂಡು ಸಹೋದರ ಶಿವಕುಮಾರ್​ನ ಹತ್ಯೆಗೆ ಸಂಚು ರೂಪಿಸಿದ್ದ.

ಅದರಂತೆ ಜ.25ರಂದು ಆಳಂದ ತಾಲೂಕಿನ ಶ್ರೀಚಂದ ಗ್ರಾಮದಿಂದ ಶಿವಕುಮಾರ್​ನನ್ನು ಮಹಾಂತೇಶ್ ಬೈಕ್​ನಲ್ಲಿ ಕರೆದುಕೊಂಡು ಹೋಗಿದ್ದ. ಮಾರ್ಗದಲ್ಲಿ ಶಿವಕುಮಾರ್​ನ ರುಂಡ ಕತ್ತರಿಸಿ ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿಗೆ ಎಸೆದು ಪರಾರಿಯಾಗಿದ್ದರು. ಈ ಕೃತ್ಯಕ್ಕೆ ಮಹಾಂತೇಶ್​ಗೆ ಸಹಕರಿಸಿದ ಬಸವರಾಜ್ ಸಲಗಾರ್, ಫಕರಿಪ್ಪ ಸಲಗಾರ್, ಸಿದ್ದಾರೂಢ ಕೋರಬಾರ್ ಮತ್ತು ಅಶೋಕ ಜಮಾದಾರ್ ಎಂಬುವರನ್ನೂ ಪೊಲೀಸರು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು