ಕಲಬುರಗಿ: ಓಕಳಿ ಗ್ರಾಮದ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಮೇಶ ಭೀಮಶಾ ಬೇಡರ (22) ಹಾಗೂ ಜಿಮ್ಮಿಬಾಯಿ ಅಶೋಕ ರಾಠೋಡ (21) ಮೃತ ಪ್ರೇಮಿಗಳು.
ಪಕ್ಕದ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಕಲಖೋರಾ ಬಳಿ ಗಿಡಕ್ಕೆ ನೇಣು ಹಾಕಿಕೊಂಡಿದ್ದಾರೆ.ಮಂಗಳವಾರ ರಾತ್ರಿ ರಮೇಶ ಮನೆಯಿಂದ ಹೊರ ಹೋಗಿದ್ದರು ಎಂದು ತಿಳಿದು ಬಂದಿದೆ.
ಇಬ್ಬರೂ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.