ಕಲಬುರಗಿ: ಕಳೆದ ಎರಡು ದಿನಗಳಿಂದ ಕಲಬುರಗಿಯ ಆಳಂದ ರಸ್ತೆಯ ದೇವಿ ನಗರದಲ್ಲಿ ಸರಣಿ ಮನೆ ಒಡೆಯುವ ಘಟನೆ ನಡೆದಿದೆ.
ಚುನಾವಣೆ ನಡೆದ ಮೇ 10 ಮತ್ತು ಮೇ 11 ರಂದು ಎರಡು ದಿನಗಳ ಕಾಲ ದೇವಿನಗರ ಬಡಾವಣೆಗೆ ನುಗ್ಗಿದ ಕಳ್ಳರು ಆರು ಮನೆಗಳಿಗೆ ಕನ್ನ ಹಾಕಿದ್ದರು.
ಬೀಗ ಹಾಕಿದ್ದ ಎರಡು ಮನೆಗಳಲ್ಲಿ ಕಳ್ಳತನ ನಡೆದಿದ್ದರೆ, ಇನ್ನು ನಾಲ್ಕು ಮನೆಗಳಲ್ಲಿ ಮನೆಯವರಿಗೆ ಗೊತ್ತಾಗದಂತೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.
ಪೊಲೀಸರು ಚುನಾವಣಾ ಭದ್ರತೆ ಹಾಗೂ ಮತ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದನ್ನು ಕಂಡು ದುಷ್ಕರ್ಮಿಗಳು ಏಕಕಾಲದಲ್ಲಿ ಈ ಕೃತ್ಯ ಎಸಗಿದ್ದಾರೆ.
ಕಳೆದೊಂದು ವಾರದಿಂದ ಮನೆ ಮುಂದೆ ನಿಲ್ಲಿಸಿದ್ದ ಎಂಟಕ್ಕೂ ಹೆಚ್ಚು ಬೈಕ್ ಗಳು ಕಳ್ಳತನವಾಗಿವೆ. ಒಟ್ಟಿನಲ್ಲಿ ದೇವಿನಗರದಲ್ಲಿ ಸರಣಿ ಮನೆಗಳ್ಳತನ, ಬೈಕ್ ಕಳ್ಳತನ ನಡೆದಿರುವುದು ಇಲ್ಲಿನ ನಿವಾಸಿಗಳನ್ನು ರಾತ್ರಿಯಿಡೀ ಜಾಗರಣೆ ಮಾಡುವಂತೆ ಮಾಡಿದೆ.
ಒಳ ಉಡುಪಿನಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ಸಾಗಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಕೆಂಪೇಗೌಡ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಅಶ್ಲೀಲ ವಿಡಿಯೋ ಬಹಿರಂಗ ವಿಚಾರವಾಗಿ ಹಾಸನ ಜೆಡಿಎಸ್ ಕಠಿಣ ಕ್ರಮವನ್ನು ತೆಗೆದುಕೊಂಡಿದೆ. ಪಕ್ಷದ ಕೋರ್ ಕಮಿಟಿ ಸಭೆಯ ನಂತರ ಜೆಡಿಎಸ್…
ಛತ್ತೀಸ್ಗಢದ ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಯ ಗಡಿಭಾಗದಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಗುಂಡಿನ ದಾಳಿ ನಡೆದಿದ್ದು ದಾಳಿಯಲ್ಲಿ…
ಬ್ಬರು ಮಹಿಳೆಯರು ಸೇರಿ ಏಳು ನಕ್ಸಲರು ಗುಂಡಿನ ದಾಳಿಗೆ ಬಲಿಯಾಗಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಸದ್ಯ ರಾಜ್ಯದಲ್ಲಿ, ರಾಜಕೀಯ ವಲಯದಲ್ಲಿ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆಯೇ ಸದ್ದು. ಇನ್ನು ಈ ಬಗ್ಗೆ ಪ್ರಧಾನಿ…
ಭಾರತದ 30 ವಿಮಾನ ನಿಲ್ದಾಣಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಏರ್ಪೋರ್ಟ್ ಸುತ್ತುಮುತ್ತ ಎಚ್ಚರಿಕೆ…