ಹುಮನಾಬಾದ್: ‘ದಿನ ಬೆಳಗಾದರೆ ನಾವು ಕೂಲಿ ಕೆಲಸಕ್ಕೆ ಹೋಗಬೇಕು. ಇಲ್ಲದಿದ್ದರೆ ಮನೆಯ ನಿರ್ವಹಣೆ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಮನೆಮಂದಿ ಎಲ್ಲರೂ ನೀರಿಗಾಗಿ ಕಾಯ್ದುಕೊಂಡು ಇರಬೇಕಾದ ಪರಿಸ್ಥಿತಿ ಬಂದಿದೆ’. ಇದು ಹುಮನಾಬಾದ್ ಪಟ್ಟಣದ ಉಪಾರ್ ಹಾಗೂ ಧನಗರ್ ಗಡ್ಡ ಬಡಾವಣೆಯ ಜನರ ಗೋಳು.
ಕಾರಂಜಾ ಜಲಾಶಯದಿಂದ ಮೂರ್ನಾಲ್ಕು ದಿನಕ್ಕೆ ಒಮ್ಮೆ ಬಿಡಲಾಗುತ್ತಿರುವ ನೀರು ಸಮಯಕ್ಕೆ ಬಾರದೆ ಇರುವುದರಿಂದ ನಮ್ಮ ಬೇರೆಲ್ಲ ಕೆಲಸ ಬಿಟ್ಟು ನೀರಿಗಾಗಿ ಕಾಯುವುದು ನಿತ್ಯದ ಕಾಯಕವಾಗಿದೆ’ ಎಂದು ಉಪಾರ್ ಬಡಾವಣೆಯ ಸಾವಿತ್ರಿಬಾಯಿ, ಶಾಂತಾಬಾಯಿ ಗೋವಿಂದ್ ಬೇಸರ ವ್ಯಕ್ತಪಡಿಸಿದರು.
‘ಪಟ್ಟಣದಲ್ಲಿ ಒಟ್ಟು 27 ವಾರ್ಡ್ಗಳಿದ್ದು ಬಹುತೇಕ ವಾರ್ಡ್ಗಳಲ್ಲಿ ನೀರಿಗಾಗಿ ನಿತ್ಯ ಪರದಾಡುವುದು ಸಹಜವಾಗಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎನ್ನುವುದು ಸಾರ್ವಜನಿಕರ ದೂರುತ್ತಿದ್ದಾರೆ. ನೀರಿನ ಸಮಸ್ಯೆಯಿಂದಾಗಿ ನಾವು ಸರಿಯಾಗಿ ಊಟ ಸಹ ಮಾಡದಂತಹ ಪರಿಸ್ಥಿತಿ ಬಂದಿದೆ. ನಮ್ಮ ಈ ಕಷ್ಟವನ್ನು ಅರಿತು ಕನಿಷ್ಠ ಎರಡು ದಿನಕ್ಕೊಮ್ಮೆ ಆದರೂ ನೀರು ಸರಬರಾಜು ಮಾಡಿ ಎಂದು ಉಪಾರ್ ಬಡಾವಣೆಯ ಶೋಭಾ, ಮೀನಾಕ್ಷಿ ಆಗ್ರಹಿಸಿದರು.