ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಆಗ್ತಾ ಇದ್ದು, ಜನರು ತಂಪು ನೀರು ಸೇವಿಸಲು ಬಡವರ ಪ್ರಿಡ್ಜ್ ಅಂತಲೆ ಕರೆಸಿಕೊಳ್ಳುವ ಗಡಿಗೆಗಳನ್ನು ಖರೀದಿಸಲು ಮುಂದಾಗಿದ್ದಾರೆ.
ಪ್ರಿಡ್ಜ್ನಲ್ಲಿರುವ ನೀರನ್ನ ಸೇವಿಸಿದರೆ, ಪದೇ ಪದೇ ನೀರಡಿಕೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹೀಗಾಗಿ ಜನ್ರು ಮಣ್ಣಿನ ಗಡಿಗೆಗಳಿಗೆ ಖರೀದಿಸಲು ಮುಂದಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
ಗಡಿಗೆಗಳಿಗೆ ಈಗ ಬೇಡಿಕೆ ಕೂಡಾ ಹೆಚ್ಚಾಗಿದೆ. ಇದರಿಂದ ಗಡಿಗೆ ಮೌಲ್ಯ ಹೆಚ್ಚಾಗಿದ್ದು, ಅಳತೆಗೆ ತಕ್ಕಂತೆ ಗಡಿಗೆಗಳ ಮೌಲ್ಯವನ್ನ ನಿಗದಿ ಪಡಿಸಿ ನಗರದ ವಿವಿದ ಕಡೆಗಳಲ್ಲಿ ಮಾರುತ್ತಿದ್ದಾರೆ. ನಗರದ ನೆಹರು ಮೈದಾನ, ನೌಬಾದ್ ಸೇರಿದಂತೆ ವಿವಿಧ ಕಡೆಗಳಲ್ಲಿ ಗಡಿಗಳನ್ನ ಮಾರಾಟಕ್ಕಿದ್ದು, 250 ರಿಂದ 300 ರೂಪಾಯಿವರೆಗೆ ಗಡಿಗೆ ದರ ನಿಗದಿಗೊಳಿಸಿ ಮಾರಾಟ ಮಾಡ್ತಿದ್ದಾರೆ.
ಇನ್ನು ಗಡಿಗೆ ಕೊಳ್ಳಲು ಬರುವಂತ ವ್ಯಕ್ತಿಗಳು ಸಹ ಗಡಿಗೆ ನೀರು ಸೇವಿಸುವುದು ಆರೋಗ್ಯಕರವಾಗಿದ್ದು, ಪ್ರಿಡ್ಜ್ನಲ್ಲಿರಿಸಿದ ಪಾನೀಯಗಳನ್ನ ಸೇವಿಸೊದರಿಂದ ರೋಗ ರುಜಿನಗಳು ಬರುವ ಸಂಭವವಿರುತ್ತೆ. ಅಷ್ಟೇ ಅಲ್ಲದೇ ಪ್ರಿಡ್ಜ್ನಲ್ಲಿನ ನೀರು ಸೇವಿಸಿದರೆ ಮತ್ತೆ ಮತ್ತೆ ನೀರಡಿಕೆ ಆಗುತ್ತದೆ ಆದರೆ ಗಡಿಗೆಯಲ್ಲಿನ ನೀರು ಬಾಯಾರಿಕೆ ಹೋಗಲಾಡಿಸುತ್ತೆ. ಹಾಗಾಗಿ ಗಡಿಗೆ ನೀರು ಸೇವಿಸುವುದು ಉತ್ತಮ ಹಾಗಾಗಿ ಗಡಿಗೆ ಖರೀದಿ ಮಾಡ್ತಿದ್ದೇವೆ ಎನ್ನುತ್ತಿದ್ದಾರೆ ಜನರು.
ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…
ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…
ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ನಡೆದಿದೆ.
ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…