ಬೀದರ್: ಜ.22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಶಾಪಿಂಗ್ ಮಾಲ್ಗಳಲ್ಲಿ ರಿಯಾಯತಿ ನೀಡುವಂತೆ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ನಗರದ ಶಾಪಿಂಗ್ ಕಾಂಪ್ಲೆಕ್ಸ್ಗಳಿಗೆ ತೆರಳಿ ಹಿಂದೂ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ನಗರದ ಜಿವಿ ಮಾಲ್, ಸ್ಮಾರ್ಟ್ ಬಜಾರ್, ವಿಶಾಲ್ ಮಾರ್ಟ್, ಟ್ರೆಂಡ್ಸದ ಸೇರಿದಂತೆ ವಿವಿಧ ಕಾಂಪ್ಲೆಕ್ಸ್ಗಳಿಗೆ ಭೇಟಿ ನೀಡಿದ್ದಾರೆ.
ಎಲ್ಲ ಹಬ್ಬದಂತೆ ದೇಶದ ಸಮಸ್ತ ಹಿಂದೂಗಳಿಗೆ ಇದೂ ದೊಡ್ಡ ಹಬ್ಬವಾಗಿದೆ, ಹಾಗಾಗಿ 22 ರಂದು ಡಿಸ್ಕೌಂಟ್ ನೀಡಿ ಸ್ವಾಗತಿಸುವಂತೆ ಕೇಳಿಕೊಂಡರು. ಹೀಗಾಗಿ ಶಾಪಿಂಗ್ ಕಾಂಪ್ಲೆಕ್ಸ್ಗಳ ವ್ಯವಸ್ಥಾಪಕರಿಗೆ ಹಿಂದೂ ಕಾರ್ಯಕರ್ತರಾದ ಗುರುನಾಥ್ ರಾಜಗೀರಾ, ಕಪಿಲ್ ಗಾದಗಿ, ವೀರು ಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿ ಮನವಿ ಸಲ್ಲಿಸಿದ್ದಾರೆ.