News Karnataka Kannada
Wednesday, May 01 2024
ಬೀದರ್

 ಜಿಲ್ಲೆಗೆ ಬಂದ ‘ದೇಶ ಉಳಿಸಿ ಸಂಕಲ್ಪ ಯಾತ್ರೆ’

'ಸಂವಿಧಾನದ ಉಳಿವಿಗಾಗಿ, ಸರ್ವಜನಾಂಗದ ಶಾಂತಿಯ ತೋಟದ ರಕ್ಷಣೆಗಾಗಿ' ಘೋಷವಾಕ್ಯದಡಿ ರಾಜ್ಯದಾದ್ಯಂತ ಕೈಗೊಂಡಿರುವ 'ದೇಶ ಉಳಿಸಿ ಸಂಕಲ್ಪ ಯಾತ್ರೆ' ಶನಿವಾರ ಜಿಲ್ಲೆ ತಲುಪಿತು.
Photo Credit : NewsKarnataka

ಬೀದರ್‌:  ‘ಸಂವಿಧಾನದ ಉಳಿವಿಗಾಗಿ, ಸರ್ವಜನಾಂಗದ ಶಾಂತಿಯ ತೋಟದ ರಕ್ಷಣೆಗಾಗಿ’ ಘೋಷವಾಕ್ಯದಡಿ ರಾಜ್ಯದಾದ್ಯಂತ ಕೈಗೊಂಡಿರುವ ‘ದೇಶ ಉಳಿಸಿ ಸಂಕಲ್ಪ ಯಾತ್ರೆ’ ಶನಿವಾರ ಜಿಲ್ಲೆ ತಲುಪಿತು. ರಮೇಶ ಸಂಕ್ರಾಂತಿ, ಎಮ್‌.ಆರ್‌. ಭೇರಿ, ಭೀಮಣ್ಣ ನವಲಗೇರಿ ನೇತೃತ್ವದಲ್ಲಿ ನಗರಕ್ಕೆ ಬಂದ ಯಾತ್ರೆಗೆ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು.

ನಗರದ ಪ್ರಮುಖ ರಸ್ತೆಗಳಲ್ಲಿ ಜನಜಾಗೃತಿ ಯಾತ್ರೆ ನಡೆಸಲಾಯಿತು. ಆನಂತರ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಬಳಿ ಮುಖಂಡರಾದ ರಮೇಶ ಸಂಕ್ರಾಂತಿ, ಎಮ್‌.ಆರ್‌. ಭೇರಿ, ಭೀಮಣ್ಣ ನವಲಗೇರಿ ಮಾತನಾಡಿ, ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅದನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಸಂವಿಧಾನ ಉಳಿದರೆ ಎಲ್ಲರೂ ಸಮಾನರಾಗಿ ಬದುಕಲು ಸಾಧ್ಯ. ಅದರ ಮಹತ್ವ ತಿಳಿಸುವುದಕ್ಕಾಗಿ ಏ. 1ರಿಂದ ಬೆಂಗಳೂರಿನಿಂದ ಮೂರು ತಂಡಗಳಲ್ಲಿ ಜನಜಾಗೃತಿ ಯಾತ್ರೆ ಆರಂಭಿಸಲಾಗಿದ್ದು, ಏ.8ರಂದು ಬೆಳಗಾವಿಯಲ್ಲಿ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.

ಈ ಯಾತ್ರೆಗೆ ಹಿರಿಯ ಸಾಹಿತಿಗಳು, ಚಿಂತಕರು, ಪ್ರಗತಿಪರರು ಸೇರಿದಂತೆ ಎಲ್ಲ ವರ್ಗದವರು ಜೊತೆಯಾಗಿದ್ದಾರೆ. ಸಂವಿಧಾನ ರಕ್ಷಣೆ ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

ಮುಖಂಡರಾದ ಮೊಹಮ್ಮದ್‌ ನಿಜಾಮುದ್ದೀನ್‌, ಅನಿಲಕುಮಾರ ಬೇಲ್ದಾರ್‌, ಓಂಪ್ರಕಾಶ ರೊಟ್ಟೆ, ಜಗದೀಶ್ವರ ಬಿರಾದಾರ, ಬಾಬುರಾವ್‌ ಪಾಸ್ವಾನ್‌, ವಿಠ್ಠಲದಾಸ ಪ್ಯಾಗೆ, ಎಸ್‌.ಎಮ್‌. ಜನವಾಡಕರ್‌, ಸೂರ್ಯಕಾಂತ, ಸಿಸ್ಟರ್‌ ಕ್ರಿಸ್ಟಿನಾ, ಮೊಹಮ್ಮದ್‌ ಆರಿಫುದ್ದೀನ್‌, ಸಂತೋಷ ಜೋಳದಾಬಕೆ, ಮಂಜುಳಾ ಮತ್ತಿತರರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು