News Karnataka Kannada
Thursday, May 02 2024
ಬೀದರ್

ಸನ್ನಡತೆ ಆಧಾರದಲ್ಲಿ 100 ಜನ ರೌಡಿಶೀಟರ್‌ ಹೆಸರುಗಳು ಪಟ್ಟಿಯಿಂದ ಹೊರಗೆ

ಸನ್ನಢತೆ ಆಧರಿಸಿ 100 ಜನರ ಹೆಸರುಗಳನ್ನು ರೌಡಿಶೀಟರ್‌ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ.
Photo Credit : News Kannada

ಬೀದರ್‌: ಸನ್ನಢತೆ ಆಧರಿಸಿ 100 ಜನರ ಹೆಸರುಗಳನ್ನು ರೌಡಿಶೀಟರ್‌ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನಗರದ ಜಿಲ್ಲಾ ಪೊಲೀಸ್‌ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ‘ಸಮಾಜಮುಖಿ ಮನಪರಿವರ್ತನೆ’ ಹಾಗೂ ಸರ್ವಧರ್ಮ ಗುರುಗಳಿಂದ ಹಿತವಚನ, ಸದ್ವರ್ತನೆ ಶಪಥ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬೀದರ್‌ ಜಿಲ್ಲಾ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಸಮಾಜಘಾತುಕ ಶಕ್ತಿಗಳು ಹಾಗು ಅಪರಾಧಿಕ ಹಿನ್ನೆಲೆ ಹೊಂದಿದವರ ಮೇಲೆ ನಿಗಾ ಇಡಲು ರೌಡಿಶೀಟರ್‌ ಪಟ್ಟಿ ತಯಾರಿಸಿದ್ದರು. ಯಾರು ಮನಃಪರಿವರ್ತನೆಗೊಂಡು ಅವರ ವ್ಯಕ್ತಿತ್ವ ಬದಲಿಸಿಕೊಂಡಿದ್ದಾರೋ ಅಂತಹವರು ಹಾಗೂ ಉನ್ನತ ಶಿಕ್ಷಣ ಪಡೆದು ಖಾಸಗಿ ಕಂಪನಿಗಳಲ್ಲಿ ನೌಕರಿಯಿಂದ ವಂಚಿತರಾಗುತ್ತಿರುವವರ ಉತ್ತಮ ನಡತೆ ನೋಡಿಕೊಂಡು ಒಟ್ಟು 100 ಜನರ ಹೆಸರು ರೌಡಿಶೀಟರ್‌ನಿಂದ ಕೈಬಿಡಲಾಗಿದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಇದೊಂದು ಉತ್ತಮ ಅವಕಾಶವಿದ್ದು, ಅದರ ಪ್ರಯೋಜನ ಪಡೆಯಬೇಕು ಎಂದು ಚನ್ನಬಸವಣ್ಣ ಹೇಳಿದರು.

ಬೆಲ್ದಾಳ ಸಿದ್ದರಾಮ ಶರಣರು, ರಾಜಯೋಗಿನಿ ಪ್ರತಿಮಾ ಬಹೇನಜಿ, ಭಂತೆ ಜ್ಞಾನಸಾಗರ, ಗ್ಯಾನಿ ದರಬಾರ ಸಿಂಗ್, ಆಸಿಫೋದ್ದಿನ್‌, ನೆಲ್ಸನ್ ಸುಮಿತ್ರ ಅವರು ಸರ್ವ ಧರ್ಮಗಳ ಮಹತ್ವ, ಶಾಂತಿ, ದಯೆ ಮಹತ್ವ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು