ಹುಮನಾಬಾದ್ : ಸುಡು ಬಿಸಿಲು ಹಾಗೂ ಬೆಂಗಳೂರಿನಿಂದ ಬಂದು ಭಾಲ್ಕಿ ಹಾಗೂ ಹುಮನಾಬಾದ್ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಸುಸ್ತಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹುಮನಾಬಾದ್ ತಹಶೀಲ್ದಾರ್ ಕಚೇರಿ ಬಳಿಯ ಚಿಕ್ಕ ಹೋಟೆಲ್ನಲ್ಲಿ ಮಂಡಕ್ಕಿ ಸೇವಿಸಿ ದಣಿವು ನೀಗಿಸಿಕೊಂಡರು.
ಪಟ್ಟಣದಲ್ಲಿ ಆಯೋಜಿಸಿದ್ದ ಜನ ಕ್ರಾಂತಿ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಹೈದರಾಬಾದ್ ಕಡೆಗೆ ಹೋಗಲು ರಾಜಶೇಖರ ಪಾಟೀಲ ಅವರೊಂದಿಗೆ ಕಾರಿನಲ್ಲಿ ಕುಳಿತು ಸಾಗಿದರು. ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಕಿಟಕಿಯಿಂದ ಹೊರಗೆ ನೋಡುತ್ತ ‘ಇಲ್ಲಿ ಚೆನ್ನಾಗಿ ಚಹಾ ಸಿಗುತ್ತದೆಯೇ’ ಎಂದು ಕೇಳಿದರು.
ರಾಜಶೇಖರ ಪಾಟೀಲ, ‘ಹೌದು ಸರ್ ಒಳ್ಳೆಯ ಚಹಾ ಹಾಗೂ ತಿಂಡಿ ಎರಡೂ ಸಿಗುತ್ತದೆ’ ಎಂದು ಹೇಳಿ ಹಳೇ ತಹಶೀಲ್ದಾರ್ ಕಚೇರಿ ಮುಂಭಾಗದ ಎಸ್.ಎಂ. ಸ್ವೀಟ್ಸ್ ಮತ್ತು ಟಿಫಿನ್ ಸೆಂಟರ್ ಬಳಿ ಕಾರು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರು.
ಕಾರಿನಿಂದ ಇಳಿದ ರಾಹುಲ್ ಗಾಂಧಿ ಹಾಗೂ ರಾಜಶೇಖರ ಪಾಟೀಲ ಅವರು ಹೋಟೆಲ್ಗೆ ತೆರಳಿ ಖೋವಾ, ಜಾಮೂನ್ ಹಾಗೂ ಮಂಡಕ್ಕಿ ಸೇವಿಸಿದರು. ನಂತರ ಚಹಾ ಸೇವಿಸಿ ದಣಿವು ಆರಿಸಿಕೊಂಡರು. ಸಿಹಿ ತಿಂಡಿ ಮಾಡಿರುವುದಕ್ಕೆ ಹೋಟೆಲ್ ಮಾಲೀಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೋಟೆಲ್ ಮಾಲೀಕ ಸೈಯದ್ ಮೋಸಿನ್ ಅಲಿ ಮಾತನಾಡಿ, ‘ರಾಹುಲ್ ಗಾಂಧಿ ಕಾರಿನಿಂದ ಇಳಿದು ನೇರವಾಗಿ ನಮ್ಮ ಹೋಟೆಲ್ಗೆ ಬಂದರು. ಒಂದು ಕ್ಷಣ ನನಗೆ ಏನೂ ತಿಳಿಯದಾಯಿತು. ಗೌಡರು ಸಹ ಜತೆಗಿದ್ದರಿಂದ ಧೈರ್ಯ ಬಂದಿತು. ಉಪಾಹಾರ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜಶೇಖರ ಪಾಟೀಲ ಉಪಾಹಾರದ ಬಿಲ್ ಪಾವತಿಸಿದರು’ ಎಂದು ಹೇಳಿದರು.
ಮೇ.15 ರಿಂದ ಆರಂಭವಾಗಿದ್ದ ಎಸ್ಎಸ್ಎಲ್ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು ರಾಜ್ಯ…
ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್ನಲ್ಲಿ ಮನೆಗೆ ಹೋಗುವಾಗ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…
ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…
ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…