News Karnataka Kannada
Tuesday, April 30 2024
ಬೀದರ್

ಔರಾದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಪ್ರಭು ಚವ್ಹಾಣ

Prabhu Chavan supports BJP for development of Aurad
Photo Credit : News Kannada

ಔರಾದ: ಔರಾದ(ಬಿ) ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಸಚಿವ ಪ್ರಭು.ಬಿ ಚವ್ಹಾಣ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಔರಾದ(ಬಿ) ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಏಪ್ರಿಲ್ 27ರಂದು ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ದುಢಕನಾಳ, ವನಮಾರಪಳ್ಳಿ, ಬಾದಲಗಾಂವ, ನಾರಾಯಣಪುರ, ಅಲ್ಲಾಪೂರ, ಮಮದಾಪೂರ, ತೇಗಂಪೂರ, ಸುಂದಾಳ, ಜಕನಾಳ, ನಂದ್ಯಾಳ, ಮಾನೂರ(ಕೆ), ನಾಗಮಾರಪಳ್ಳಿ, ಕರಂಜಿ(ಬಿ), ಕರಂಜಿ(ಕೆ), ರಾಯಪಳ್ಳಿ, ನಿಂಗದಳ್ಳಿ, ನಾಗನಪಲ್ಲಿ, ಚಿಂತಾಕಿ, ಇಟಗ್ಯಾಳ, ಖಾಶೆಂಪೂರ, ಯನಗುಂದಾ, ಬರ್ದಾಪೂರ, ಕೊಳ್ಳೂರ, ಎಕಲಾರ, ತುಳಜಾಪೂರ, ಬೋರಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿದರು.

ತಾವು ಶಾಸಕರಾದ ನಂತರ ಔರಾದ(ಬಿ) ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಎಲ್ಲ ಗ್ರಾಮಗಳಿಗೆ ಲಭಿಸಿಬೆ. ಸದಾ ಜನಹಿತ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಕ್ಷೇತ್ರದ ಬೆಳವಣಿಗೆ ಇನ್ನಷ್ಟು ಯೋಜನೆಗಳಿದ್ದು ಅವೆಲ್ಲವನ್ನೂ ಸಾಕಾರಗೊಳಿಸಬೇಕಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ದೊಂಡಿಬಾ ನರೋಟೆ, ಮಾರುತಿ ಚವ್ಹಾಣ, ರಾಜು ಪೋಕಲವಾರ, ಬಾಲಾಜಿ ನರೋಟೆ, ರಾಮ ನರೋಟೆ, ಸಂತೋಷ ಪೋಕಲವಾರ, ಪ್ರಕಾಶ ಅಲ್ಮಾಜೆ, ಸಚಿನ ರಾಠೋಡ್, ಖಂಡೋಬಾ ಕಂಗಟೆ, ದಯಾನಂದ ಹಳ್ಳಿಖೇಡೆ, ಗುರು ಪಾಟೀಲ, ಮಹಾದೇವ ಮಾಳಕರಿ, ರವೀಂದ್ರ ರೆಡ್ಡಿ, ರಾವಸಾಬ ಪಾಟೀಲ ಜಕನಾಳ, ಪ್ರದೀಪ ಪವಾರ, ನಾಗನಾಥ ಮೋರ್ಗೆ, ಮೃತ್ಯುಂಜಯ ಅನೀಲ ಗುಂಡಪ್ಪ, ಶರಣಪ್ಪ ಪಾಟೀಲ, ಬಸವರಾಜ ಜೊನ್ನಿಕೇರಿ, ಮಂಜು ಸ್ವಾಮಿ, ಶಿವಾಜಿ ಚವ್ಹಾಣ ಹಾಗೂ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು