ಔರಾದ: ಔರಾದ(ಬಿ) ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಸಚಿವ ಪ್ರಭು.ಬಿ ಚವ್ಹಾಣ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಔರಾದ(ಬಿ) ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಏಪ್ರಿಲ್ 27ರಂದು ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ದುಢಕನಾಳ, ವನಮಾರಪಳ್ಳಿ, ಬಾದಲಗಾಂವ, ನಾರಾಯಣಪುರ, ಅಲ್ಲಾಪೂರ, ಮಮದಾಪೂರ, ತೇಗಂಪೂರ, ಸುಂದಾಳ, ಜಕನಾಳ, ನಂದ್ಯಾಳ, ಮಾನೂರ(ಕೆ), ನಾಗಮಾರಪಳ್ಳಿ, ಕರಂಜಿ(ಬಿ), ಕರಂಜಿ(ಕೆ), ರಾಯಪಳ್ಳಿ, ನಿಂಗದಳ್ಳಿ, ನಾಗನಪಲ್ಲಿ, ಚಿಂತಾಕಿ, ಇಟಗ್ಯಾಳ, ಖಾಶೆಂಪೂರ, ಯನಗುಂದಾ, ಬರ್ದಾಪೂರ, ಕೊಳ್ಳೂರ, ಎಕಲಾರ, ತುಳಜಾಪೂರ, ಬೋರಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿದರು.
ತಾವು ಶಾಸಕರಾದ ನಂತರ ಔರಾದ(ಬಿ) ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಎಲ್ಲ ಗ್ರಾಮಗಳಿಗೆ ಲಭಿಸಿಬೆ. ಸದಾ ಜನಹಿತ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಕ್ಷೇತ್ರದ ಬೆಳವಣಿಗೆ ಇನ್ನಷ್ಟು ಯೋಜನೆಗಳಿದ್ದು ಅವೆಲ್ಲವನ್ನೂ ಸಾಕಾರಗೊಳಿಸಬೇಕಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ದೊಂಡಿಬಾ ನರೋಟೆ, ಮಾರುತಿ ಚವ್ಹಾಣ, ರಾಜು ಪೋಕಲವಾರ, ಬಾಲಾಜಿ ನರೋಟೆ, ರಾಮ ನರೋಟೆ, ಸಂತೋಷ ಪೋಕಲವಾರ, ಪ್ರಕಾಶ ಅಲ್ಮಾಜೆ, ಸಚಿನ ರಾಠೋಡ್, ಖಂಡೋಬಾ ಕಂಗಟೆ, ದಯಾನಂದ ಹಳ್ಳಿಖೇಡೆ, ಗುರು ಪಾಟೀಲ, ಮಹಾದೇವ ಮಾಳಕರಿ, ರವೀಂದ್ರ ರೆಡ್ಡಿ, ರಾವಸಾಬ ಪಾಟೀಲ ಜಕನಾಳ, ಪ್ರದೀಪ ಪವಾರ, ನಾಗನಾಥ ಮೋರ್ಗೆ, ಮೃತ್ಯುಂಜಯ ಅನೀಲ ಗುಂಡಪ್ಪ, ಶರಣಪ್ಪ ಪಾಟೀಲ, ಬಸವರಾಜ ಜೊನ್ನಿಕೇರಿ, ಮಂಜು ಸ್ವಾಮಿ, ಶಿವಾಜಿ ಚವ್ಹಾಣ ಹಾಗೂ ಇತರರು ಉಪಸ್ಥಿತರಿದ್ದರು.