ಬೀದರ್: ಕೈ ಅಭ್ಯರ್ಥಿ ಸಾಗರ್ ಖಂಡ್ರೆ ವಕೀಲ ಆಗದೇ ಇದ್ರೂ ವಕೀಲ ಅಂತಾ ಹೇಳಿಕೊಂಡಿದ್ದಾರೆ ಎಂಬ ಖೂಬಾ ಹೇಳಿಕೆಗೆ ‘ನನ್ನ ಕಡೆ ಎಲ್ಲಾ ದಾಖಲೆಗಳು ಇವೆ ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿ ಬಿಡುಗಡೆ ಮಾಡ್ತೇನೆ ಅಂತಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ್ ಖಂಡ್ರೆ ಹೇಳಿದ್ದರು.
ಈಗ ಸಾಗರ್ ಖಂಡ್ರೆ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಹೈಕೋರ್ಟ್, ಸುಪ್ರೀಂ ಕೋರ್ಟ್ ಪ್ರ್ಯಾಕ್ಟೀಸ್ ಮಾಡಿದ್ದೇನೆ ಅಂತಾ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ.
ಪ್ರ್ಯಾಕ್ಟೀಸ್ ಮಾಡಲು ಎಐಬಿಇ ಮತ್ತು ಸಿಓಪಿ ತೇರ್ಗಡೇ ಆಗಬೇಕು. ಆದ್ರೆ ಅವರೂ, ಯಾವುದನ್ನು ಪಾಸ್ ಆಗದೇ ವಕೀಲನಾಗಿದ್ದೇನೆ ಅಂತಾ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕನಿಷ್ಟ 6-7 ತಿಂಗಳು ಪ್ರ್ಯಾಕ್ಟೀಸ್ ಮಾಡಬೇಕು. ಏನೂ ಮಾಡದೇ ವಕೀಲ ಅಂತಾ ಹೇಳ್ತಿದ್ದಾರೇ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಕಿಡಕಾರಿದ್ರು.
ಯಾವುದೇ ವಕಾಲತ್ತು ಮಾಡದೇ, ಸಮಾಜಸೇವೆ ಮಾಡದೇ ಆದಾಯದ ಮೂಲ ತೋರಿಸಿದ್ದಾರೆ. ತಂದೆಗಿಂತ ಹೆಚ್ಚು ಸುಳ್ಳು ಹೇಳುವ ಕೆಲಸವನ್ನ ಸಾಗರ್ ಖಂಡ್ರೆ ಮಾಡುತ್ತಿದ್ದು, ಜನರಿಗೆ ದಾರ ತಪ್ಪಿಸಿ ಬುರುಡೆ ಬಿಡುವ ಕೆಲಸ ಮಾಡ್ತಾ ಇದ್ದಾರೆ.
ಖಂಡ್ರೆ ಪರಿವಾರದ ವಿರುದ್ದ ಮಾತನಾಡಿದ್ದಕ್ಕೆ ಮಾನನಷ್ಟ ಮೊಕದ್ದಮೆ ಹಾಕ್ತೇನೆ ಎಂಬ ಈಶ್ವರ ಖಂಡ್ರೆ ಹೇಳಿಕೆಗೆ ತಿರುಗೇಟು ನೀಡಿ, ಇವತ್ತೇ ಒಳ್ಳೆಯ ದಿನವಿದೆ. ಇಂದೇ ಹಾಕೋಕೆ ಹೇಳಿ ಎಂದು ಖಂಡ್ರೆ ಹೇಳಿಕೆಗೆ ವ್ಯಂಗ್ಯವಾಡಿದ್ರು.
ಉಡುಪಿಯ ಕರಾವಳಿ ಜಂಕ್ಷನ್ ಬಳಿ ಇರುವ ಬಿರಿಯಾನಿ ಹಟ್ ಹೊಟೇಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು…
1890-1947ರ ಅವಧಿಯ ಭಿತ್ತಿಪತ್ರ, ಬಟ್ಟೆ ಲೇಬಲ್, ಬೆಂಕಿ ಪೊಟ್ಟಣದ ಮೇಲಿನ ಲೇಬಲ್ಗಳ ಕಲ್ಲಚ್ಚು ಕಲಾ ಪ್ರದರ್ಶನವನ್ನು ಕುಂಜಿಬೆಟ್ಟುವಿನ ಅದಿತಿ ಕಲಾ…
ಫುಟ್ಬಾಲ್ ಲೆಜೆಂಡ್ ಆಟಗಾರ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6 ರಂದು ಕೊಲ್ಕತ್ತಾದ ಸಾಲ್ಟ್ ಲೇಕ್…
ನೋಕಿಯಾ ತನ್ನ 3210 ಫೋನನ್ನು ಮತ್ತೆ ಮರು ಪರಿಚಯಿಸಿದೆ. 90ರ ದಶಕದಲ್ಲಿ ಐಕಾನಿಕ್ ಫೋನ್ ಆಗಿ ಮಾರುಕಟ್ಟೆಗೆ ಬಂದ ನೋಕಿಯಾ…
ಗಾಳಿ - ಮಳೆಗೆ ಮರ ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಮೇ 16…
ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಪತ್ನಿ ಅನಿತಾ ಗೋಯಲ್ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.