ಬೀದರ್: ಸೋಲಿನ ಭೀತಿಯಿಂದ ಇಲ್ಲಾ ಸಲ್ಲದ ಹೇಳಿಕೆ ಕೊಡುತ್ತಿರುವ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿಕೆ ಖಂಡಿಸುತ್ತೆನೆ. ಜಿಲ್ಲೆಯ ರೈತರಿಗೆ ಬೆಳೆ ವಿಮೆ 12೦೦ ಕೋಟಿ ರೂ ಬೆಳೆ ವಿಮೆ ಬಂದಿದೆ ಅಂತಾ ಕೇಂದ್ರ ಸಚಿವ ಭಗವಂತ ಖೂಖಾ ಅಪ್ಪಟ ಸುಳ್ಳು ಹೇಳಿತ್ತಿದ್ದಾರೆ.ಜಿಲ್ಲೆಯಲ್ಲಿ ಬೆಳೆ ವಿಮೆ ಹೆಸರಲ್ಲಿ ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ ಹೆಸರಲ್ಲಿ ಕಳೆದ ಒಂದೆ ವರ್ಷದಲ್ಲಿ ಬೆಳೆ ವಿಮೆ ಕಂಪನಿಗಳಿಗೆ 650ಕೋಟಿ ರೂ ಲಾಭವಾಗಿದೆ..
ಎನು ಹೂಡಿಕೆ ಮಾಡದೆ,ಎನು ಪರಿಶ್ರಮ ಪಡದೆ ಅರ್ಜಿ ಹಾಕಿ ಗುತ್ತಿಗೆ ಪಡೆದುಕೊಂಡು ಅವರಿಗೆ ಪರೋಕ್ಷವಾಗಿ ಬೆಳೆ ವಿಮೆ ಕಂಪನಿಗಳಿಗೆ ನೆರವಾಗಲು ಮಾರ್ಗಸೂಚಿ ನಿಯಮಗಳನ್ನ ತಯಾರು ಮಾಡಿ ಅವರಿಗೆ 650ಕೋಟಿ ಲೂಟಿ ಮಾಡಲು ಸಹಕರಿಸಿದ ಭಗವಂತ ಖೂಬಾ ಇದರ ಬಗ್ಗೆ ಹೇಳಬೇಕಲ್ಲಾ.
ಇದರಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರ ಪಾಲೆಷ್ಟು ಅಂತಾ ಪ್ರಶ್ನೆ ಮಾಡಿದ ಸಚಿವ ಈಶ್ವರ ಖಂಡ್ರೆ. ದಲಿತರ ಬಗ್ಗೆ ಮೊಸಳೆ ಕಣ್ಷಿರು ಸೂರಿಸುವ ಸಚಿವ ಭಗವಂತ ಖೂಬಾ ತಮ್ಮ ಸಹೋದರನ ಮಾಂಜ್ರಾ ಕಂಪನಿ ಹೆಸರಲ್ಲಿ 96ಜನರಿಗೆ ಕೆಲ್ಸ ಕೊಡಸಿ
ಇಫ್ ಪಿ ಎಫ್ ಕಟ್ಟದೆ ಅವರಿಗೆ ಕೇವಲ ಐದರಿಂದ ಆರು ಸಾವಿರ ಹಣ ಕೊಟ್ಟ ಅವರನ್ನ ಲೂಟಿ ಮಾಡಿಲ್ವಾ..??
ಅವರ ವಿರುದ್ದ ಕಾರ್ಮಿಕ ಇಲಾಖೆ ನೋಟಿಸ್ ನೀಡಿದ್ದು ಮರೆತರಾ..?? ಬರಿ ಸುಳ್ಳು ಅಪಪ್ರಚಾರ ಮಾಡೋದು ನನ್ನ ವಿರುದ್ದ ಹಾಗೂ ನನ್ನ ಪರಿವಾರದ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದನ್ನ ನಾನು ಖಂಡಿಸುತ್ತೆನೆ ಎಂದ ಸಚಿವ ಈಶ್ವರ ಖಂಡ್ರೆ…
ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ವೈಯಕ್ತಿಕ ಟೀಕೆ ಹಿನ್ನೆಲೆ ಅವರ ವಿರುದ್ದ ಮಾನನಷ್ಟ ಮೊಕ್ದಮೆ ಹಾಕುತ್ತೆನೆ ಎಂದ ಸಚಿವ ಈಶ್ವರ ಖಂಡ್ರೆ. ಬೀದರ್ ನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಭಗವಂತ ಖೂಬಾ ವಿರುದ್ಧ ಕಿಡಿಕಾರಿದರು.