ಬೀದರ್: ಚಿಟಗುಪ್ಪ ತಾಲ್ಲೂಕಿನಲ್ಲಿ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂಗೀತ ಸಂಗಮೇಶ್ ಅವರನ್ನುಕರ್ತವ್ಯ ಲೋಪ ಆರೋಪದಡಿ ವರ್ಗಾವಣೆ ಮಾಡಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಮಂತ್ರಿ ಈಶ್ವರ್ ಖಂಡ್ರೆ ಹೇಳಿದರು.
ಹುಮನಾಬಾದ್ನಲ್ಲಿ ಮಾತನಾಡಿದ ಅವರು ಸಂಗೀತ ಸಂಗಮೇಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಹಾಗೂ ಕರ್ತವ್ಯಲೋಪಕ್ಕೆ ಅವಕಾಶವಿಲ್ಲ. ಇದು ಅರಣ್ಯ ಇಲಾಖೆಯ ಎಲ್ಲ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.
ಅರಣ್ಯ ಅಧಿಕಾರಿ ಸಂಗೀತ ಸಂಗಮೇಶ ವಿರುದ್ಧ ಅರಣ್ಯ ಭೂಮಿ ನಾಶ ಹಾಗೂ ಕರ್ತವ್ಯ ಲೋಪ ಕುರಿತಂತೆ ತಾಲೂಕಿನ ಚಾಂಗಲೇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಶೋಕ್ ಅಲಿಪುರ್ ದೂರು ಸಲ್ಲಿಸಿದ್ದರು.
ಅಧಿಕಾರಿ ಲೋಪ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಿಕೆ ಸರಣಿ ವಿರುದ್ಧ ಕರ್ತವ್ಯ ವರದಿಗಳನ್ನು ಪ್ರಕಟಿಸಿತ್ತು.