ಬೀದರ್ : ನಗರದ ನೀರಿನ ಟ್ಯಾಂಕರ್ನಲ್ಲಿ ಓರ್ವನ ಶವ ಪತ್ತೆಯಾಗಿದ್ದು ಆತ ಟ್ಯಾಂಕರ್ಗೆ ಜಿಗಿದು ಸಾವನಪ್ಪಿರುವುದು ಇದೀಗ ಬೆಳಕಿಗೆ ಬಂದಿದೆ. ಘಟನೆ ಬೀದರ್ನ ಅಣದೂರ್ ಗ್ರಾಮದಲ್ಲಿ ನಡೆದಿದೆ.
ಅದೇ ನೀರನ್ನ ಎರಡ್ಮೂರು ದಿನಗಳ ಕಾಲ ಇಡೀ ಗ್ರಾಮಸ್ಥರು ಕುಡಿದಿದ್ದು, ಆತಂಕ ಶುರುವಾಗಿದೆ. ಗ್ರಾಮದಲ್ಲಿ ಸರಬರಾಜಾಗುವ ನೀರು ಕಲುಷಿತ ಹಾಗೂ ದುರ್ವಾಸನೆ ಬರ್ತಿದ್ದಂತೆ ವಾಟರ್ ಟ್ಯಾಂಕ್ ಪರಿಶೀಲಿಸಿದ್ದಾರೆ. ಗ್ರಾಮದ ನಿವಾಸಿ 27 ವರ್ಷದ ರಾಜು ಶೈಲಪ್ಪಾ ದಾಸರ್ ಕುಡಿಯೋ ನೀರಿನ ಟ್ಯಾಂಕ್ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಪತ್ನಿ ಪರಪುರುಷನ ಜೊತೆ ಓಡಿ ಹೋಗಿದ್ದಕ್ಕೆ ಮನನೊಂದಿದ್ದ ರಾಜು, ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿಯೇ ವಾಟರ್ ಟ್ಯಾಂಕ್ಗೆ ರಾಜು ಬಿದ್ದಿರೋ ಶಂಕೆ ವ್ಯಕ್ತವಾಗಿದೆ. ಅದೇ ಟ್ಯಾಂಕ್ ನೀರನ್ನ ಜನರು ಕುಡಿದಿದ್ದರಿಂದ ಗ್ರಾಮದಲ್ಲಿ ಆರೋಗ್ಯ ಇಲಾಖೆ ಬೀಡು ಬಿಟ್ಟಿದೆ.