News Karnataka Kannada
Monday, April 29 2024
ಬೀದರ್

ಗಣೇಶ ಹಾಗೂ ಇದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಿ

Celebrate the festivals of Ganesh and Id Milad peacefully
Photo Credit : News Kannada

ಬೀದರ್: ಜಿಲ್ಲೆಯಲ್ಲಿ ಗಣೇಶ ಹಾಗೂ ಇದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಇಂದು ಬೀದರ್ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್ ಹೇಳಿದರು.

ಅವರು ಶುಕ್ರವಾರ ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಪೊಲೀಸ್ ಪಥ ಸಂಚಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೀದರ್ ಜಿಲ್ಲೆಯಲ್ಲಿ ಜನರು ಈ ಹಬ್ಬಗಳನ್ನು ನಿರ್ಭಯವಾಗಿ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಈ ಪಥಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ನಾಲ್ಕು ಕೆ.ಎಸ್.ಆರ್.ಪಿ ತುಕಡಿಗಳು. ಮೂರು ಜನ ಡಿವೈಎಸ್ಪಿ. ಹದಿನಾಲ್ಕು ಜನ ಇನ್ಸ್ಪೆಕ್ಟರ್. ಮೂವತ್ತು ಜನ ಸಬ್ ಇನ್ಸ್ಪೆಕ್ಟರ್. 930 ಜನ ಪೊಲೀಸ್ ಕಾನ್ಸಟೆಬಲಗಳನ್ನು ಬಂದೋಬಸ್ತಗಾಗಿ ನಿಯೋಜನೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ 1470 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ವಿವಿಧ ಗಣೇಶ ಪ್ರತಿಷ್ಠಾನ ಮಂಡಳಿಗಳ ಸಭೆ ಮಾಡಿ ಅವರಿಗೆ ನಿರ್ದೆಶನಗಳನ್ನು ನೀಡಲಾಗಿದೆ. ಇಂದಿನ ಈ ಪಥ ಸಂಚಲನ ಬೀದರ್ ನಗರದ ನಯಾ ಕಮಾನ. ಶಹಾ ಗಂಜ್ ಸೇರಿದಂತೆ ಪ್ರಮುಖ  ಸರ್ಕಲ್ ಗಳ ಮೂಲಕ ಬೀದರ್ ನಗರದಲ್ಲಿ ನಡೆಯಲಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು