News Karnataka Kannada
Friday, May 10 2024
ಬೀದರ್

ಬೀದರ್: ತೇಗಂಪುರ ತಾಂಡಾ, ನೀರಿಗಾಗಿ ನಿತ್ಯ ಅಲೆದಾಟ

Bidar: Tegampura Tanda, a daily wanderer for water
Photo Credit : News Kannada

ಬೀದರ್: ಭಾಲ್ಕಿ ತಾಲ್ಲೂಕಿನ ತೇಗಂಪುರ ತಾಂಡಾ ನಿವಾಸಿಗಳ ಜಲ ಮೂಲವಾಗಿದ್ದ ಕೊಳವೆಬಾವಿಗಳು ಬಿಸಿಲಿನ ತಾಪಕ್ಕೆ ಬತ್ತಿದ್ದು, ಕೊಡ ನೀರಿಗಾಗಿ ನಿವಾಸಿಗಳು ದೂರದ ಹೊಲಗಳಿಗೆ ಅಲೆಯು ಪರಿಸ್ಥಿತಿ ನಿರ್ಮಾಣವಾಗಿದೆ.

‘ನಮ್ಮ ತಾಂಡಾದಲ್ಲಿ ಸುಮಾರು ಆರು ತಿಂಗಳಿಂದ ನಾಲ್ಕು ಕೊಳವೆಬಾವಿಗಳು ಕೈ ಕೊಡುತ್ತಿರುವುದರಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ಈಗ ಬೇಸಿಗೆ ಕಾಲ ಆರಂಭ ಆಗಿರುವುದರಿಂದ ಪ್ರತಿದಿನ ನೀರಿನ ಸಮಸ್ಯೆಯ ತೀವ್ರತೆ ಹೆಚ್ಚಾಗಿದೆ. ಹಾಗಾಗಿ, ತಾಂಡಾದ 20 ಕುಟುಂಬಗಳ ಸದಸ್ಯರು ಸಂಜೆ, ಬೆಳಿಗ್ಗೆ ಕೊಡ ನೀರಿಗಾಗಿ ಹೊಲ, ಹೊಲ ಅಲೆಯಬೇಕಾಗಿದೆ’ ಎಂದು ನಿವಾಸಿ ಪ್ರಕಾಶ ಜಾಧವ ಅಳಲು ತೋಡಿಕೊಂಡರು.

‘ಪ್ರತಿನಿತ್ಯ ಎರಡು ಕಿಲೋ ಮೀಟರ್ ದೂರದಿಂದ ನೀರು ತರುತ್ತೇವೆ. ನೀರು ತರಲು ಹೋದಾಗ ವಿದ್ಯುತ್ ಇಲ್ಲವಾದರೆ ಗಂಟೆಗಟ್ಟಲೇ ಕಾಯಬೇಕಾಗಿದೆ’ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

‘ನೀರಿನ ಸಮಸ್ಯೆ ಕುರಿತು ಅನೇಕ ಸಲ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆ ಹರಿದಿಲ್ಲ. ಈಗಲಾದರೂ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಮ್ಮ ಸಮಸ್ಯೆ ಪರಿಹಾರಕ್ಕೆ ವಿಶೇಷ ಗಮನ ಹರಿಸಿ ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಬೇಕು. ನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು