News Karnataka Kannada
Saturday, May 04 2024
ಬೀದರ್

ಅಪಘಾತ ವಲಯವಾದ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ

: ಪಟ್ಟಣದ ಮೂಲಕ ಹಾದು ಹೋಗುವ ಬೀದರ್-ಶ್ರೀರಂಗಪಟ್ಟಣ 150ಎ ಹೆದ್ದಾರಿಯ ಭಾಗವಾಗಿರುವ ಪಟ್ಟಣದಿಂದ ಕೆ.ಬಿ.ಕ್ರಾಸ್‌ ವರಗಿನ ರಸ್ತೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ.
Photo Credit : NewsKarnataka

ಹುಳಿಯಾರು: ಪಟ್ಟಣದ ಮೂಲಕ ಹಾದು ಹೋಗುವ ಬೀದರ್-ಶ್ರೀರಂಗಪಟ್ಟಣ 150ಎ ಹೆದ್ದಾರಿಯ ಭಾಗವಾಗಿರುವ ಪಟ್ಟಣದಿಂದ ಕೆ.ಬಿ.ಕ್ರಾಸ್‌ ವರಗಿನ ರಸ್ತೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

ಹಲವು ವರ್ಷಗಳ ಬೇಡಿಕೆಯಾಗಿದ್ದ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಕಾಮಗಾರಿಗೆ ಆರಂಭದ ದಿನಗಳಲ್ಲಿ ಇದ್ದ ಸಂತಸ ಈಗಿಲ್ಲ. ಕಾಮಗಾರಿ ಕೊನೆಯ ಹಂತದಲ್ಲಿದ್ದು, ವಾಹನ ಸವಾರರ ಸಂತಸವೀಗ ಅಪಘಾತಗಳ ಸರಮಾಲೆಯ ಕಹಿ ನೆನಪಿನಲ್ಲಿ ಕರಗುತಿದೆ. ರಸ್ತೆಗಿಳಿಯಲು ಸಾರ್ವಜನಿಕರು ಭಯಪಡುವಂತಾಗಿದೆ.

ಈ ರಸ್ತೆ ಬಳಕೆಗೆ ಸಿದ್ಧವಾದ ದಿನದಿಂದಲೇ ಅಪಘಾತಗಳು ನಡೆಯುತ್ತಿವೆ. ಕಳೆದ ವಾರದಲ್ಲಿ ನಾಲ್ಕೈದು ಅಪಘಾತ ಸಂಭವಿಸಿದ್ದು, ಸಾಲ್ಕಟ್ಟೆ ಕ್ರಾಸ್‌ನಲ್ಲಿ ಶುಕ್ರವಾರ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇದಕ್ಕೆ ನಿಖರ ಕಾರಣಗಳು ಗೋಚರಿಸುತ್ತಿಲ್ಲ.

ರಸ್ತೆ ಇಕ್ಕೆಲಗಳಲ್ಲಿದ್ದ ಮರಗಳನ್ನು ಕಡಿದು ರಸ್ತೆ ವಿಶಾಲವಾಗಿದ್ದರೂ ಅಪಘಾತಗಳು ತಪ್ಪುತ್ತಿಲ್ಲ. ಅಪಘಾತ ವಲಯಗಳಲ್ಲಿ ಸ್ಪಷ್ಟ ಸೂಚನಾ ಫಲಕಗಳು ಕಾಣಿಸುತ್ತಿಲ್ಲ. ಅಪಘಾತ ತಪ್ಪಿಸಲೆಂದು ಅನೇಕ ಕಡೆ ವೇಗ ನಿಯಂತ್ರಕ ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಮುಖ್ಯ ಹೆದ್ದಾರಿಯಿಂದ ಒಂದೇ ಕಡೆ ಎರಡು-ಮೂರು ಕಡೆ ತಿರುವು ರಸ್ತೆಗಳಿದ್ದು ಅಲ್ಲಿ ವೃತ್ತ ನಿರ್ಮಿಸಿಲ್ಲ. ಅಪಘಾತವಾದ ಸ್ಥಳದಲ್ಲಿ ವಿಭಜಕ ಸೇರಿದಂತೆ ಸಣ್ಣ ಪುಟ್ಟ ದುರಸ್ತಿಯನ್ನಷ್ಟೇ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು