ಬೀದರ್: ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಮುಖ ಮುಖಂಡರ ಶಿವಕುಮಾರ ದೇಶಪಾಂಡೆ ಅವರು ಕೆಲವು ದಿನಗಳ ಜೆಡಿಎಸ್ ಕಾರ್ಯಕರ್ತರ ಒತ್ತಾಯದ ಮೇರೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದರು, ಮತ್ತೆ ತಮ್ಮ ಸ್ವ ಇಚ್ಛೆಯಿಂದ ಯುವ ಮುಖಂಡ ಸಂತೋಷ ಬೆಲ್ದಾಳೆ, ವಿರಶೇಟ್ಟಿ ಮೂಲೆಗೆ ಹಾಗೂ ಅನಿಲಕುಮಾರ ಅವರ ನೇತೃತ್ವದಲ್ಲಿ ಮತ್ತೆ ಮರಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಶಿವಕುಮಾರ ದೇಶಪಾಂಡೆ ಅವರಿಗೆ ಶಾಲು ಹಾಕಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡ ಬಳಿಕ ಯುವ ಮುಖಂಡ ಸಂತೋಷ ಬೆಲ್ದಾಳೆ ಮಾತನಾಡಿ ಕ್ಷೇತ್ರದ ಇತರೆ ಪಕ್ಷದವರು ಸೋಲಿನ ಭೀತಿಯಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಲು ತಮ್ಮ ಇಚ್ಛೆ ಇಲ್ಲಾದಿದರೂ ಒತ್ತಾಯ ಪೂರ್ವಕವಾಗಿ ನಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಸೇರ್ಪಡೆ ಮಾಡಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದರು.
ಬಿಜೆಪಿ ಪಕ್ಷ ಸಮುದ್ರವಿದಂತೆ ನಮ್ಮ ಪಕ್ಷಕ್ಕೆ ಬರುವರಿಗೆ ಸ್ವಾಗತವಿದೆ, ಸದ್ಯಕ್ಕೆ ನಮ್ಮ ಪಕ್ಷದಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ ಅವರ ನೇತೃತ್ವದಲ್ಲಿ ದಿನಾಲೂ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೆರ್ಪಡೆಗೊಳುತ್ತಿದ್ದಾರೆ.
ಈ ಸಂದರ್ಭದಲ್ಲಿ ವಿರಶೇಟ್ಟಿ ಮೂಲೆಗೆ, ಅನೀಲ ಮೂಲೆಗೆ, ಸಚ್ಚಿನ ರೇಕುಳಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ಬೂತ್ಮಟ್ಟದಿಂದ ಗಟ್ಟಿಗೊಳಿಸಿ ಇಲ್ಲಿ ಶಾಸಕರನ್ನು ಗೆಲ್ಲಿಸುವುದರ ಮೂಲಕ ಬೇರೆ ಪಕ್ಷದವರಿಗೆ ಪಾಠ ಕಲಿಸುವ ಕೆಲಸ ಕಾರ್ಯಕರ್ತರು ಮಾಡಬೇಕು.