ಬೀದರ್, ಜ.7: ಹೆಲಿಕ್ಯಾಪ್ಟರ ಉತ್ಸವದಲ್ಲಿ ಹೆಚ್ಚಿನ ಜನರು ಭಾಗವಹಿಸುವ ಮೂಲಕ ಬೀದರ ಉತ್ಸವದ ಆನಂದವನ್ನು ಸವಿಯಬೇಕೆಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವರಾದ ಭಗವಂತ ಖೂಬಾ ಹೇಳಿದರು.
ಅವರು ಶನಿವಾರ ಬೀದರ ಉತ್ಸವದ ಅಂಗವಾಗಿ ಬಿ.ವಿ.ಬಿ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹೆಲಿಕ್ಯಾಪ್ಟರ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆಲಿಕ್ಯಾಪ್ಟರ ಉತ್ಸವವು ಮೂರು ದಿನಗಳ ಕಾಲ ನಡೆಯಲಿದ್ದು, ಹೆಚ್ಚಿನ ಜನರು ಹೆಲಿಕ್ಯಾಪ್ಟರದಲ್ಲಿ ಕುಳಿತು ಬೀದರ ನಗರದ ವಿವಿಧ ಸ್ಥಳಗಳನ್ನು ವೀಕ್ಷಣೆ ಮಾಡುವ ಮೂಲಕ ಉತ್ಸವವನ್ನು ಜಿಲ್ಲೆಯ ಹೆಚ್ಚಿನ ಜನರು ಆನಂದಿಸುವುದರ ಜೊತೆಗೆ ಬೀದರ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಅವರು ಮಾತನಾಡಿ ಬೀದರ ಉತ್ಸವದ ವತಿಯಿಂದ ಮೂರು ದಿನಗಳ ಕಾಲ ಹೆಲಿಕ್ಯಾಪ್ಟರ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಅದಕ್ಕೆ ಇಂದು ನಾವೆಲ್ಲರೂ ಸೇರಿ ಚಾಲನೆ ನೀಡಿದ್ದೇವೆ. ಇಂತಹ ಉತ್ಸವಗಳು ನಮ್ಮ ಭಾಗದಲ್ಲಿ ನಡೆಯುವುದು ಅಪರೂಪ ಹೆಲಿಕ್ಯಾಪ್ಟರನಲ್ಲಿ ನಾವು ಕುಳಿತುಕೊಳ್ಳಬೇಕಾದರೆ ಬೆಂಗಳೂರಿಗೆ ಹೊಗಬೇಕಾಗುತ್ತದೆ ಆದರೆ ಬೀದರ ಉತ್ಸವದಲ್ಲಿ ಈ ಅವಕಾಶವನ್ನು ಕಲ್ಪಿಸಲಾಗಿರುವುದರಿಂದ ನಮ್ಮ ಭಾಗದ ಜನರು ಈ ಹೆಲಿಕ್ಯಾಪ್ಟರ ಉತ್ಸವದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಹೆಲಿಕ್ಯಾಪ್ಟರ ಮೊದಲ ಟಿಕೇಟ ಪಡೆದ ನೇಹಾ ಅಂಜುಮ ಅವರಿಗೆ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಮೊದಲ ಟಿಕೇಟ ನೀಡುವ ಮೂಲಕ ಹೆಲಿಕ್ಯಾಪ್ಟರ ಉತ್ಸವಕ್ಕೆ ಚಾಲನೆ ನೀಡಿದರು.
ಥುಂಭಾ ಏವಿಯೇಷನ್ ಹೆಲಿಕ್ಯಾಪ್ಟರ ಸೇವೆಯನ್ನು ಒದಗಿಸುತ್ತಿದೆ. ಈ ಸಂದರ್ಭದಲ್ಲಿ ನಾಗಮಾರಪಳ್ಳಿ ಫೌಂಡೇಶನ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ, ರಾಜ್ಯ ಅಭಿವೃದ್ಧಿ ಮತ್ತು ಮೇಲಸ್ತುವಾರಿ ಸಮಿತಿ ಭಾರತ ಸರ್ಕಾರದ ಸದಸ್ಯರಾದ ಶಿವಯ್ಯ ಸ್ವಾಮಿ, ಬೀದರ ಉತ್ಸವ ಪ್ರಚಾರ ಸಮಿತಿಯ ಸದಸ್ಯರಾದ ವಿರುಪಾಕ್ಷ ಗಾದಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.