ಬೀದರ್: ಆಸ್ಪತ್ರೆಯಿಂದ ಔಷಧ ಬೇರೆಡೆಗೆ ಸಾಗಿಸುತ್ತಿದ್ದ ಆರೋಪದ ಮೇಲೆ ಬೀದರ್ ಜಿಲ್ಲೆಯಲ್ಲಿ ಗ್ರಾಮಸ್ಥರೇ ವೈದ್ಯಾಧಿಕಾರಿಯನ್ನು ಹಿಡಿದಿದ್ದಾರೆ.
ಬೀದರ್ ತಾಲೂಕಿನ ಗುನಳ್ಳಿ ಸರ್ಕಾರಿ ಆಯುಷ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ತಾಹೇರಾ ಮೇಲೆ ದೂರು ದಾಖಲಾಗಿದೆ.
ಆಯುಷ್ ಆಸ್ಪತ್ರೆಗೆ ಬಂದ ಔಷಧಗಳನ್ನ ತಮ್ಮ ಸ್ವಂತ ಕಾರ್ನಲ್ಲಿ ತಾಹೇರಾ ಸಾಗಿಸಲು ಯತ್ನಿಸಿದ್ರು ಎನ್ನಲಾಗಿದೆ. ತಿಂಗಳಿಗೊಮ್ಮೆ ಬಂದು ಆಸ್ಪತ್ರೆಗೆ ಬಂದ ಔಷಧ ಕಳವು ಮಾಡಿಕೊಂಡು ಹೋಗುತ್ತಿದ್ದರು. ಔಷಧ ಕಳವು ಮಾಡುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಡಾಕ್ಟರ್ ತಾಹೇರಾ ಎರಡು ತಿಂಗಳಲ್ಲಿ ರಿಟೈರ್ಡ್ ಆಗಬೇಕಿತ್ತು.