Categories: ಬೀದರ್

ಬೀದರ್‌: ಸಂಪರ್ಕ ರಸ್ತೆಗೆ ಹುಡುಕಾಡುವ ಚಾಲಕರು

ಬೀದರ್‌: ನಗರದಲ್ಲಿ ರಿಂಗ್‌ರೋಡ್‌ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಕಾರಣ ವಾಹನ ಚಾಲಕರು ಸಂಪರ್ಕ ರಸ್ತೆಗಾಗಿ ಹುಡುಕಾಡುತ್ತ ಸಂಚರಿಸಬೇಕಾದ ಪರಿಸ್ಥಿತಿ ಇದೆ.

ದೇವ ದೇವ ವನದಿಂದ ಚಿಕಪೇಟ್‌ ಮೂಲಕ ಅಲಿಯಾಬಾದ್‌ ವರೆಗೆ, ಕೊಳಾರ (ಕೆ) ಕೈಗಾರಿಕೆ ಪ್ರದೇಶದಿಂದ ಬೆಳ್ಳೂರಾ ಕ್ರಾಸ್‌ ವರೆಗೆ, ಚಿದ್ರಿ ಕ್ರಾಸ್‌ನಿಂದ ಶಹಾಪುರ ಗೇಟ್‌ ವರೆಗೆ ರಿಂಗ್‌ರೋಡ್‌ ಪೂರ್ಣಗೊಂಡಿದೆ.

ವರ್ತುಲ ರಸ್ತೆಯೆಂದರೆ ಅದು ‘ರಿಂಗ್‌’ ಆಕಾರದಲ್ಲಿ ಇರಬೇಕು. ಆದರೆ, ಬೀದರ್‌ ನಗರದಲ್ಲಿ ‘ರಿಂಗ್‌’ ಪೂರ್ಣಗೊಂಡಿಲ್ಲ.

ಅಲಿಯಾಬಾದ್‌ನಿಂದ ಕೊಳಾರ (ಕೆ) ವರೆಗೆ ರಿಂಗ್‌ರೋಡ್‌ ರಸ್ತೆ ಮುಂದುವರೆಯುವುದಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ಕೂಡಿಕೊಂಡು ಅಲ್ಲಿಂದ ಕೊಳಾರ ತಲುಪಿ, ಬೆಳ್ಳೂರಾ ಕ್ರಾಸ್‌ ವರೆಗೆ ಹೋಗಬೇಕು. ಪುನಃ ಅಲ್ಲೂ ರಿಂಗ್‌ರೋಡ್‌ ಸಂಪರ್ಕ ಇಲ್ಲ. ಚಿದ್ರಿ ಕ್ರಾಸ್‌ ವರೆಗೆ ಬರಬೇಕು. ಇನ್ನು, ಚಿದ್ರಿ ಕ್ರಾಸ್‌ನಿಂದ ಶಹಾಪುರ ಗೇಟ್‌ ವರೆಗೆ ಕೂಡುವ ವರ್ತುಲ ರಸ್ತೆ ಬೀದರ್‌-ಹೈದರಾಬಾದ್‌ ಅಂತರರಾಜ್ಯ ಹೆದ್ದಾರಿ ಸೇರುತ್ತದೆ. ಔರಾದ್‌ ಕಡೆಗೆ ಹೋಗಬೇಕಾದವರು ಪುನಃ ಅಲ್ಲೂ ರಿಂಗ್‌ರೋಡಿಗೆ ಹುಡುಕಾಟ ನಡೆಸಬೇಕು.

ಇನ್ನು, ಹಳೆ ಆರ್‌ಟಿಒ ಕಚೇರಿಯಿಂದ ಚಿದ್ರಿ ಕ್ರಾಸ್‌ ವರೆಗೆ ರಿಂಗ್‌ರೋಡ್‌ ಕೂಡು ರಸ್ತೆ ನಿರ್ಮಿಸಲಾಗಿದೆ. ಆದರೆ, ಈ ಮಾರ್ಗ ಬಹಳ ಕಿರಿದಾಗಿದೆ. ಅದರಲ್ಲೂ ಏರ್‌ಫೋರ್ಸ್‌ ಕ್ಯಾಂಟೀನ್‌ ಪ್ರವೇಶ ದ್ವಾರದ ಬಳಿಯಿರುವ ರೈಲ್ವೆ ಅಂಡರ್‌ಪಾಸ್‌ ಅಪಘಾತ ವಲಯವಾಗಿ ಬದಲಾಗಿದೆ. ಶಿವನಗರ, ಪ್ರತಾಪ ನಗರ ಹಾಗೂ ಮೈಲೂರ, ಗುಂಪಾ, ಚಿದ್ರಿಗೆ ಈ ರಸ್ತೆ ಸಂಪರ್ಕ ಸೇತುವೆಯಾಗಿದೆ.

Ashika S

Recent Posts

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

9 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

30 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

54 mins ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

1 hour ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

2 hours ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

2 hours ago