ಬೀದರ್: ಹುಲಸೂರ ಪಟ್ಟಣದಲ್ಲಿ ಮಳೆಗಾಗಿ ಗೊಂಬೆಗಳ ವಿಶೇಷ ಮದುವೆ ಮಾಡಿದ ಮಹಿಳೆಯರು , ಗಡಿ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನಲ್ಲಿ ವಿಭಿನ್ನವಾದ ಸಂಪ್ರದಾಯವನ್ನು ನಾವು ನೋಡಬಹುದು, ಮಳೆಗಾಲ ಪ್ರಾರಂಭವಾಗಿ 20 ದಿನ ಕಳೆದರೂ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಹುಣಸೂರು ಪಟ್ಟಣದಲ್ಲಿ ಮಹಿಳೆಯರಿಂದ ಗೊಂಬೆಗಳ ಮದುವೆ , ಸಕಾಲಕ್ಕೆ ಮೃಘ ನಕ್ಷತ್ರದಂದು ಮಳೆ ಬಾರದೆ ಇರುವುದರಿಂದ ಮಹಿಳೆಯರೆಲ್ಲ ಸೇರಿ ಗೊಂಬೆಗಳ ಮದುವೆ ಮಾಡಿ ಹರಕೆ ತೀರಿಸುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ .
ಪಂಚಾಳ ಎನ್ನುವರ ಮನೆಯ ಆವರಣದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಓಣಿಯ ಮಹಿಳೆಯರು , ಬೀಗರು , ನೆಂಟರ ರೂಪದಲ್ಲಿ ಮದುವೆ ಹಾಜರಾಗುವುದು ವಿಶೇಷ . ವಿಶೇಷವಾಗಿ ಮದುವೆ ಮನೆಯಲ್ಲಿ ಯಾವ ರೀತಿ ಸಂಭ್ರಮ ತುಂಬಿಕೊಂಡಿರುತ್ತೋ ಅದೇ ರೀತಿಯಾಗಿ ಹಾಡುಗಳು ಹಾಡುವ ಮುಖಾಂತರ ಗೊಂಬೆಗೆ ಅರಿಶಿನ , ಎಣ್ಣೆಯನ್ನು ಹಚ್ಚಿ , ಸ್ನಾನ ಮಾಡಿಸಿ , ಪುರುಣಿತಿ ಓದುತ್ತಾ ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವಸ್ಥಾಕ್ಕೆ ತೆರಳುತ್ತಾರೆ .
ದೇವರ ದರ್ಶನ ಪಡೆದ ನಂತರ , ಮದುವೆ ಮಂಟಪಕ್ಕೆ ಆಗಮಿಸಿ ಶೃಂಗಾರಗೋಳಿಸಿದ ಮಂಟಪದಲ್ಲಿ ಅಕ್ಷತೆಯ ಹಾಡು ಹಾಡುವ ಮುಖಾಂತರ ವಿಶೇಷ ಗೋಂಬೆಗಳ ಮದುವೆ ಮಾಡುತ್ತಾರೆ.ನಂತರ ಬೀಗರಿಗೆ , ನೆಂಟರಿಗೆ ಮಹಿಳೆಯರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಿರುತ್ತಾರೆ . ಗೊಂಬೆಗಳ ಮದುವೆಯ ವಿಶೇಷತೆ ಎನಂದರೆ , ಈ ತರಹ ಗೊಂಬೆಗಳ ಮದುವೆ ಮಾಡಿಕೊಟ್ಟರೆ ಒಂದೇ ದಿನದಲ್ಲಿ ಮಳೆಯಾಗಿ ರೈತರು ಹೊಲದಲ್ಲಿ ಬಿತ್ತನೆ ಮಾಡಿ ಗ್ರಾಮ ಸುಭಿಕ್ಷವಾಗುತ್ತದೆ ಎಂಬ ಬಿತ್ತನೆ ಮಾಡಿ ಗ್ರಾಮ ನಂಬಿಕೆ ಇದರ ಹಿಂದಿದೆ ಎಂದು ಗ್ರಾಮದ ಮಹಿಳೆಯರ ನಂಬಿಕೆಯಾಗಿದೆ.