News Karnataka Kannada
Friday, May 17 2024
ಬೀದರ್

ಬೀದರ್: ಹುಲಸೂರ ಪಟ್ಟಣದಲ್ಲಿ ಮಳೆಗಾಗಿ ಗೊಂಬೆಗಳ ವಿಶೇಷ ಮದುವೆ

Bidar: Dolls' wedding for rain
Photo Credit : News Kannada

ಬೀದರ್: ಹುಲಸೂರ ಪಟ್ಟಣದಲ್ಲಿ ಮಳೆಗಾಗಿ ಗೊಂಬೆಗಳ ವಿಶೇಷ ಮದುವೆ ಮಾಡಿದ ಮಹಿಳೆಯರು , ಗಡಿ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನಲ್ಲಿ ವಿಭಿನ್ನವಾದ ಸಂಪ್ರದಾಯವನ್ನು ನಾವು ನೋಡಬಹುದು, ಮಳೆಗಾಲ ಪ್ರಾರಂಭವಾಗಿ 20 ದಿನ ಕಳೆದರೂ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಹುಣಸೂರು ಪಟ್ಟಣದಲ್ಲಿ ಮಹಿಳೆಯರಿಂದ ಗೊಂಬೆಗಳ ಮದುವೆ , ಸಕಾಲಕ್ಕೆ ಮೃಘ ನಕ್ಷತ್ರದಂದು ಮಳೆ ಬಾರದೆ ಇರುವುದರಿಂದ ಮಹಿಳೆಯರೆಲ್ಲ ಸೇರಿ ಗೊಂಬೆಗಳ ಮದುವೆ ಮಾಡಿ ಹರಕೆ ತೀರಿಸುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ .

ಪಂಚಾಳ ಎನ್ನುವರ ಮನೆಯ ಆವರಣದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಓಣಿಯ ಮಹಿಳೆಯರು , ಬೀಗರು , ನೆಂಟರ ರೂಪದಲ್ಲಿ ಮದುವೆ ಹಾಜರಾಗುವುದು ವಿಶೇಷ . ವಿಶೇಷವಾಗಿ ಮದುವೆ ಮನೆಯಲ್ಲಿ ಯಾವ ರೀತಿ ಸಂಭ್ರಮ ತುಂಬಿಕೊಂಡಿರುತ್ತೋ ಅದೇ ರೀತಿಯಾಗಿ ಹಾಡುಗಳು ಹಾಡುವ ಮುಖಾಂತರ ಗೊಂಬೆಗೆ ಅರಿಶಿನ , ಎಣ್ಣೆಯನ್ನು ಹಚ್ಚಿ , ಸ್ನಾನ ಮಾಡಿಸಿ , ಪುರುಣಿತಿ ಓದುತ್ತಾ ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವಸ್ಥಾಕ್ಕೆ ತೆರಳುತ್ತಾರೆ .

ದೇವರ ದರ್ಶನ ಪಡೆದ ನಂತರ , ಮದುವೆ ಮಂಟಪಕ್ಕೆ ಆಗಮಿಸಿ ಶೃಂಗಾರಗೋಳಿಸಿದ ಮಂಟಪದಲ್ಲಿ ಅಕ್ಷತೆಯ ಹಾಡು ಹಾಡುವ ಮುಖಾಂತರ ವಿಶೇಷ ಗೋಂಬೆಗಳ ಮದುವೆ ಮಾಡುತ್ತಾರೆ.ನಂತರ ಬೀಗರಿಗೆ , ನೆಂಟರಿಗೆ ಮಹಿಳೆಯರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಿರುತ್ತಾರೆ . ಗೊಂಬೆಗಳ ಮದುವೆಯ ವಿಶೇಷತೆ ಎನಂದರೆ , ಈ ತರಹ ಗೊಂಬೆಗಳ ಮದುವೆ ಮಾಡಿಕೊಟ್ಟರೆ ಒಂದೇ ದಿನದಲ್ಲಿ ಮಳೆಯಾಗಿ ರೈತರು ಹೊಲದಲ್ಲಿ ಬಿತ್ತನೆ ಮಾಡಿ ಗ್ರಾಮ ಸುಭಿಕ್ಷವಾಗುತ್ತದೆ ಎಂಬ ಬಿತ್ತನೆ ಮಾಡಿ ಗ್ರಾಮ ನಂಬಿಕೆ ಇದರ ಹಿಂದಿದೆ ಎಂದು ಗ್ರಾಮದ ಮಹಿಳೆಯರ ನಂಬಿಕೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು