ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಬುಧೇರಾ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸೇರ್ಪಡೆ ಹಾಗು ಎಲ್ಲಾ ಸಮುದಾಯಗಳ ಮುಖಂಡರ ಸನ್ಮಾನ ಹಾಗು ಉಚಿತ ಎಲ್ ಇ ಡಿ ಬಲ್ಫ್ ವಿತರಣೆ ಸಮಾರಂಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಅಶೋಕ ಖೇಣಿ ರವರು ಭಾಗವಹಿಸಿ ವೇದಿಕೆ ಉದ್ದೇಶಿಸಿ ಮಾತನಾಡಿದರು.
ಅನ್ಯ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರಿಗೆ ಅಶೋಕ್ ಖೇಣಿ ರವರು ಹಾಗೂ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ, ಕರೀಮ ಸಾಬ ಕಮಠಾಣರವರು ಪಕ್ಷದ ಬಾವುಟ ಕೊಟ್ಟು ಬರಮಾಡಿಕೊಂಡರು.
ನಂತರ ಗ್ರಾಮದ ಮುಖಂಡರಿಗೆ, ಮಹಿಳೆಯರಿಗೆ ಉಚಿತ ಎಲ್ ಇ ಡಿ ಬಲ್ಫ್ ವಿತರಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಗ್ರಾಮದ ಮುಖಂಡರಾದ ಶಫಿ ಬುಧೇರಾ, ರಾಜಕುಮಾರ ಸಜ್ಜನಶಟ್ಟಿ, ಸಂಗಾರಡ್ಡಿ, ಮಹೆಬೂಬ್ ಸಾಬ್, ಜಗನಾಥ, ಸಂತೋಷ್, ಕಿಸಾನ್ ಸೇಲ್ ಅಧ್ಯಕ್ಷರಾದ ಸಂತೋಷ ಪಾಟೀಲ, ಕಿಸಾನ್ ಸೇಲ್ ರಾಜ್ಯ ಕಾರ್ಯದರ್ಶಿಯಾದ ಉದಯಕುಮಾರ್ ಚಟನಳ್ಳಿ, ಮುಖಂಡರಾದ ರಾಜಕುಮಾರ ಮಡಕಿ, ಚಂದ್ರಕಾಂತ ಶೇರಿಕಾರ, ಮೋಹೀನ್ ಫಠಾಣ, ಕುಪೇಂದ್ರ ಸೇರಿ ಅನೇಕರು ಉಪಸ್ಥಿತರಿದ್ದರು.