ಬೀದರ: ಜಿಲ್ಲೆಯ ಎಲ್ಲಾ ಕಡೆ ಮಳೆಗಾಲ ಪ್ರಾರಂಭವಾಗುವುದರಿಂದ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಸಾರ್ವಜನಿಕರು ಮನೆಯಲ್ಲಿ ಎಲ್ಲರೂ ಕಾಯಿಸಿ ಆರಿಸಿರುವ ನೀರು ಕುಡಿಯುವಂತೆ ಹಾಗೂ ಹೊಲ ಗದ್ದೆಗಳಿಗೆ ತೆರಳುವಾಗ ಕಾಯಿಸಿ ಆರಿಸಿರುವ ಕುಡಿಯುವ ನೀರು ತೆಗೆದುಕೊಂಡು ಹೋಗುವಂತೆ ಜಾಗ್ರತೆ ವಹಿಸಬೇಕು.
ಆರೋಗ್ಯದಲ್ಲಿ ಶೀತ, ಕೆಮ್ಮು, ಜ್ವರದ ಏರುಪೇರು ಕಂಡುಬಂದಲ್ಲಿ ತಕ್ಷಣವೇ ತಾಲ್ಲೂಕು ಆರೋಗ್ಯ ಕೇಂದ್ರ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.